September 6, 2026
ಸಂಘ-ಸಂಸ್ಥೆಗಳು

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟ
ವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

ಬೆಳ್ತಂಗಡಿ: ಕಳೆದ ಕೆಲವು ಸಮಯದಿಂದ ಅನಿಯಮಿತವಾಗಿ ವಿದ್ಯುತ್ ಹಲವು ಬಾರಿ ಕಡಿತವಾಗಿರುವುದಿಂದ ನಗರದ ವ್ಯಾಪಾರ ವ್ಯವಹಾರ ಮಾಡುವ ವರ್ತಕರಿಗೆ ಈ ಸಮಸ್ಯೆಯಿಂದ ಬಹಳಷ್ಟು ಕಷ್ಟ ನಷ್ಟಗಳಿಗೆ ಒಳಗಾಗುವ ನಿಟ್ಟಿನಲ್ಲಿ ಬೆಳ್ತಂಗಡಿ ಮೆಸ್ಕಾಂನ ಎಇ ಹಾಗೂ ಜೆಇ ಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.


ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್ ಅಳವಡಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಾಗಿ ಕೋರಿಕೆ ಮಾಡಲಾಯಿತು. ಜೆಇ ಹಾಗೂ ಎಇ ಯವರು ಇನ್ನು ಮುಂದಕ್ಕೆ ಇಂತಹ ಸಮಸ್ಯೆಯಾಗದಂತೆ ಕ್ರಮವಹಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಮುಂದಿನ ವಾರ ಮಂಗಳೂರಿನಿಂದ ಅಧಿಕಾರಿಗಳು ಬರುವಾಗ ನಮ್ಮನ್ನು ಆಮಂತ್ರಿಸಿ ಖುದ್ದು ಅವರನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದಾರೆ. ವರ್ತಕರ ಸಂಘದ ಅಧ್ಯಕ್ಷರಾದ ರೊನಾಲ್ಡ್ ಲೋಬೋ ಕಾರ್ಯದರ್ಶಿ ಲ್ಯಾನ್ಸಿ ಎ. ಪಿರೇರಾ, ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವಿನ್ಸೆಂಟ್ ಡಿ. ಸೋಜ, ಶಶಿಧರ್ ಪೈ, ಶೀತಲ್ ಜೈನ್ ಹಾಗೂ ಅಶೋಕ್ ಲಾಯಿಲ ಉಪಸ್ಥಿತರಿದ್ದರು.

Related posts

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಶಿಶಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ 2025 ರ ಕ್ಯಾಲೆಂಡರ್ ಬಿಡುಗಡೆ

Suddi Udaya

ಕಣಿಯೂರು ಕುಲಾಲ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಗ್ರಾಹಕರ ಸಮಾಲೋಚನಾ ಸಭೆ

Suddi Udaya
error: Content is protected !!