July 23, 2026
ಸಂಘ-ಸಂಸ್ಥೆಗಳು

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

ಅನಿಯಮಿತ ವಿದ್ಯುತ್: ವ್ಯಾಪಾರಸ್ಥರಿಗೆ ಸಂಕಷ್ಟ
ವರ್ತಕರ ಸಂಘದಿಂದ ಮೆಸ್ಕಾಂ ಇಲಾಖೆಗೆ ಮನವಿ

ಬೆಳ್ತಂಗಡಿ: ಕಳೆದ ಕೆಲವು ಸಮಯದಿಂದ ಅನಿಯಮಿತವಾಗಿ ವಿದ್ಯುತ್ ಹಲವು ಬಾರಿ ಕಡಿತವಾಗಿರುವುದಿಂದ ನಗರದ ವ್ಯಾಪಾರ ವ್ಯವಹಾರ ಮಾಡುವ ವರ್ತಕರಿಗೆ ಈ ಸಮಸ್ಯೆಯಿಂದ ಬಹಳಷ್ಟು ಕಷ್ಟ ನಷ್ಟಗಳಿಗೆ ಒಳಗಾಗುವ ನಿಟ್ಟಿನಲ್ಲಿ ಬೆಳ್ತಂಗಡಿ ಮೆಸ್ಕಾಂನ ಎಇ ಹಾಗೂ ಜೆಇ ಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.


ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್ ಅಳವಡಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಾಗಿ ಕೋರಿಕೆ ಮಾಡಲಾಯಿತು. ಜೆಇ ಹಾಗೂ ಎಇ ಯವರು ಇನ್ನು ಮುಂದಕ್ಕೆ ಇಂತಹ ಸಮಸ್ಯೆಯಾಗದಂತೆ ಕ್ರಮವಹಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಮುಂದಿನ ವಾರ ಮಂಗಳೂರಿನಿಂದ ಅಧಿಕಾರಿಗಳು ಬರುವಾಗ ನಮ್ಮನ್ನು ಆಮಂತ್ರಿಸಿ ಖುದ್ದು ಅವರನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದಾರೆ. ವರ್ತಕರ ಸಂಘದ ಅಧ್ಯಕ್ಷರಾದ ರೊನಾಲ್ಡ್ ಲೋಬೋ ಕಾರ್ಯದರ್ಶಿ ಲ್ಯಾನ್ಸಿ ಎ. ಪಿರೇರಾ, ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವಿನ್ಸೆಂಟ್ ಡಿ. ಸೋಜ, ಶಶಿಧರ್ ಪೈ, ಶೀತಲ್ ಜೈನ್ ಹಾಗೂ ಅಶೋಕ್ ಲಾಯಿಲ ಉಪಸ್ಥಿತರಿದ್ದರು.

Related posts

‘ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪುರಸ್ಕಾರ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಅವರಿಗೆ ಸನ್ಮಾನ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ:ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ- 11 ಸ್ಥಾನ ಸೌಹಾರ್ದ ಸಹಕಾರಿ ಬಂಧುಗಳ ಒಕ್ಕೂಟಕ್ಕೆ 1- ಸ್ಥಾನ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿ

Suddi Udaya

ಮೂಡುಬಿದಿರೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ 35ನೇ ಶಾಖೆ ಉದ್ಘಾಟನೆ

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಬ ಯಕ್ಷಗಾನ ಕಲಾ ಬಳಗದಿಂದ ಬಣ್ಣಗಾರಿಕೆ ಶಿಬಿರ

Suddi Udaya

ಪೆರಾಡಿ :ಬಂಟರ ಸಂಘ (ರಿ.)ಬೆಳ್ತಂಗಡಿ ಮತ್ತು ಬಂಟರ ಗ್ರಾಮ ಸಮಿತಿ ಪೆರಾಡಿ ಇದರ ಸರ್ವ ಸದಸ್ಯರ ಕುಟುಂಬ ಮಿಲನ ಕಾರ್ಯಕ್ರಮ

Suddi Udaya
error: Content is protected !!