
ತೆಕ್ಕಾರು: ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ತನಿಯಪ್ಪ ನಾಯ್ಕ ಎಂಬುವರು ಮನೆಗೆ ಗುಡ್ಡ ಕುಸಿದು ಬಂಡೆಕಲ್ಲು ಬಂದು ಬಿದ್ದು ಹಾನಿಗೊಂಡ ಘಟನೆ ಮೇ.30 ನಡೆದಿದೆ.

ಕಳೆದ ರಾತ್ರಿ 8ಗಂಟೆಗೆ ಸುಮಾರು ಸುರಿದ ಧಾರಾಕಾರ ಮಳೆಗೆ ಗುಡ್ಡದೊಂದಿಗೆ ಬಂಡೆ ಕಲ್ಲು ಬಂದು ಮನೆಗೆ ಅಪ್ಪಳಿಸಿದೆ. ಮನೆಯವರು ಕಲ್ಲು ಬೀಳುವ ಕೆಲ ಕ್ಷಣಗಳ ಮುಂಚೆ ನೂತನ ಮನೆಯಲ್ಲಿದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.