ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೆಟ್ಟಿಪಾಲು/ಹೇಡ್ಯಾ ಚಿನ್ನಮ್ಮ ಕೋಂ ಕೆಡಿ ದೇವಸಿ ಮತ್ತು ಎಲ್ಸಮ್ಮ ಕೋಂ ಎಡ್ವರ್ಡ್ ಲಾರ್ದೊನ್ ಇವರ ಕೃಷಿ ತೋಟಕ್ಕೆ ಎರಡು ದಿನಗಳಿಂದ ನಿರಂತರ ಒಂಟಿ ಸಲಗ ದಾಳಿ ಇಟ್ಟು ಅಪಾರ ಕೃಷಿ ಹಾನಿ ಮಾಡಿದೆ.

ಆನೆಯ ಉಪಟಳದಿಂದ ಕೃಷಿಕರು ಕಂಗೆಟ್ಟು ಆನೆ ಬಾರದ ಹಾಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ತಿಳಿಸಿದ್ದಾರೆ.