26.9 C
ಪುತ್ತೂರು, ಬೆಳ್ತಂಗಡಿ
June 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್‌ನಲ್ಲಿ ಬಕ್ರೀದ್ ಆಚರಣೆ

ಕಾಜೂರು: ಮನುಷ್ಯರಲ್ಲಿರುವ ಪರಸ್ಪರ ವಿಶ್ವಾಸ ನಷ್ಟ ಹೊಂದಿದೆ ಎಂದರೆ ಅದು ಲೋಕಾವಸಾನದ ಕುರುಹು ಆಗಿದೆ ಇಂದು ಮಕ್ಕಳಿಗೆ ತಂದೆ ತಾಯಿಯಲ್ಲೂ ಪರಸ್ಪರ ಸ್ನೇಹಿತರೆಲ್ಲೂ ಇಂದು ವಿಶ್ವಾಸ ನಷ್ಟ ಹೊಂದಿದೆ ಸಹಾಯ ಮಾಡಿದ ಗೆಳೆಯನನ್ನೇ ಕೊಚ್ಚಿ ಕೊಚ್ಚಿ ಕೊಂದು ಹಾಕುವಂತಹ ಕಾಲವಿದು ಇಂತಹ ಕಾಲದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಪರಸ್ಪರ ವಿಶ್ವಾಸ ನಷ್ಟ ಹೊಂದಿರುವ ಕಾಲ ಬಂತೆಂದಾದರೆ ಅದು ಲೋಕಾವಸಾನದ ಕುರುಹುವಾಗಿದೆ ಎಂದು ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ ಅ ತಂಜ್ಞಳ್ ರವರು 1450 ವರ್ಷಗಳ ಹಿಂದೆ ಹೇಳಿದ್ದಾರೆ ಎಂದು ಸಯ್ಯದ್ ಕಾಜೂರು ತಂಗಳ್ ರವರು ಬಕ್ರೀದ್ ಪ್ರಯುಕ್ತ ನಡೆದ ಜುಮ್ಮಾ ಭಾಷಣದಲ್ಲಿ ನುಡಿದರು.

ಜೂ.7ರಂದು ಪರಸ್ಪರ ಶಾಂತಿ ಸೌಹಾರ್ದದಿಂದ ನಾವು ಬದುಕಿ ಬಾಳ ಬೇಕು ಜಗತ್ತಿನಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದರು. ವಿಶ್ವ ಶಾಂತಿಗಾಗಿ ಕಾಜೂರು ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಯು. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಖಾಫ್ ಸಲಹಾ ಮಂಡಳಿ ಸದಸ್ಯ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್. ಕಾಜೂರು, ಕೋಶಾಧಿಕಾರಿ ಮೊಹಮ್ಮದ್ ಕಮಲ್, ಉಪಾಧ್ಯಕ್ಷ ಬದ್ರುದ್ದೀನ್ ಹಾಗೂ ಸಮಿತಿ ಸದಸ್ಯರುಗಳು, ಜಮತ್ ಹಿರಿಯರು ಉಲಮಾ ಉಮರ ನಾಯಕರು, ಯುವಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು

Related posts

ಕೊಕ್ಕಡ ಹಳ್ಳಿಗೇರಿ ಕಾಮಧೇನು ಗೋಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ | ಡಿ. ವೀರೇಂದ್ರ ಹೆಗ್ಗಡೆ ಹಾಗೂ ಇಸ್ಕಾನ್ ನ ಹರೀಶ್ ಭೇಟಿ

Suddi Udaya

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya

ಮರ ಕಟ್ಟಿಂಗ್ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಮೆಷಿನ್ ತಗುಲಿ ಸಾವ್ಯದ ವ್ಯಕ್ತಿ ಪ್ರಶಾಂತ್ ಪೂಜಾರಿ ಸಾವು

Suddi Udaya

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

Suddi Udaya

ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಜ್ಞಾಪನಾ ಶಕ್ತಿ ಪರೀಕ್ಷೆ ಸ್ಪರ್ಧೆ

Suddi Udaya

ಬೆಳ್ತಂಗಡಿ: ಸವಣಾಲುವಿನಲ್ಲಿ ಬೋನಿಗೆ ಬಿದ್ದ ಚಿರತೆ

Suddi Udaya
error: Content is protected !!