July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್‌ನಲ್ಲಿ ಬಕ್ರೀದ್ ಆಚರಣೆ

ಕಾಜೂರು: ಮನುಷ್ಯರಲ್ಲಿರುವ ಪರಸ್ಪರ ವಿಶ್ವಾಸ ನಷ್ಟ ಹೊಂದಿದೆ ಎಂದರೆ ಅದು ಲೋಕಾವಸಾನದ ಕುರುಹು ಆಗಿದೆ ಇಂದು ಮಕ್ಕಳಿಗೆ ತಂದೆ ತಾಯಿಯಲ್ಲೂ ಪರಸ್ಪರ ಸ್ನೇಹಿತರೆಲ್ಲೂ ಇಂದು ವಿಶ್ವಾಸ ನಷ್ಟ ಹೊಂದಿದೆ ಸಹಾಯ ಮಾಡಿದ ಗೆಳೆಯನನ್ನೇ ಕೊಚ್ಚಿ ಕೊಚ್ಚಿ ಕೊಂದು ಹಾಕುವಂತಹ ಕಾಲವಿದು ಇಂತಹ ಕಾಲದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಪರಸ್ಪರ ವಿಶ್ವಾಸ ನಷ್ಟ ಹೊಂದಿರುವ ಕಾಲ ಬಂತೆಂದಾದರೆ ಅದು ಲೋಕಾವಸಾನದ ಕುರುಹುವಾಗಿದೆ ಎಂದು ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ ಅ ತಂಜ್ಞಳ್ ರವರು 1450 ವರ್ಷಗಳ ಹಿಂದೆ ಹೇಳಿದ್ದಾರೆ ಎಂದು ಸಯ್ಯದ್ ಕಾಜೂರು ತಂಗಳ್ ರವರು ಬಕ್ರೀದ್ ಪ್ರಯುಕ್ತ ನಡೆದ ಜುಮ್ಮಾ ಭಾಷಣದಲ್ಲಿ ನುಡಿದರು.

ಜೂ.7ರಂದು ಪರಸ್ಪರ ಶಾಂತಿ ಸೌಹಾರ್ದದಿಂದ ನಾವು ಬದುಕಿ ಬಾಳ ಬೇಕು ಜಗತ್ತಿನಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದರು. ವಿಶ್ವ ಶಾಂತಿಗಾಗಿ ಕಾಜೂರು ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಯು. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಖಾಫ್ ಸಲಹಾ ಮಂಡಳಿ ಸದಸ್ಯ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್. ಕಾಜೂರು, ಕೋಶಾಧಿಕಾರಿ ಮೊಹಮ್ಮದ್ ಕಮಲ್, ಉಪಾಧ್ಯಕ್ಷ ಬದ್ರುದ್ದೀನ್ ಹಾಗೂ ಸಮಿತಿ ಸದಸ್ಯರುಗಳು, ಜಮತ್ ಹಿರಿಯರು ಉಲಮಾ ಉಮರ ನಾಯಕರು, ಯುವಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು

Related posts

ಚಾರ್ಮಾಡಿ ಘಾಟ್‌ನಲ್ಲಿ ಕಾಣಿಸಿಕೊಂಡ ಕಾಡಾನೆ

Suddi Udaya

ಸೆ.10: ಗುರುವಾಯನಕೆರೆ ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುನಮನ: ಎಕ್ಸೆಲ್ ನ ವಿದ್ಯಾರ್ಥಿಗಳ ಪಾಲಕರಾದ 272 ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಕನ್ಯಾಡಿ ಶ್ರೀ ಹರಿದ್ವಾರ ಶಾಖಾ ಮಠದಲ್ಲಿ 7ನೇ ವರ್ಷದ ವಾರ್ಷಿಕೋತ್ಸವ

Suddi Udaya

ಗುರುವಾಯನಕೆರೆ: ಸೆಲೆಕ್ಷನ್ ವೇರ್ ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ರಿಯಾಯಿತಿ

Suddi Udaya

ಪ್ರೋ. ಕೆ.ಯಸ್ ಭಗವಾನ್ ಅವರ ಹೇಳಿಕೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಖಂಡನೆ

Suddi Udaya

ಬಸದಿ ಸ್ವಚ್ಛತಾ ತಂಡದಿಂದ ವನಮಹೋತ್ಸವದ ಅಂಗವಾಗಿ ಪಕ್ಷಿ ಸಂಕುಲದ ರಕ್ಷಣೆಗಾಗಿ ಬೀಜಬಿತ್ತನೆ

Suddi Udaya
error: Content is protected !!