ಲಾಯಿಲ: ಕಾರ್ಕಳದ ಭಾರತಿ ರಮಣ ಆಚಾರ್ಯರವರ ಮಾರ್ಗದರ್ಶನದಲ್ಲಿ ಶ್ರೀ ರಾಘವೇಂದ್ರ ಮಠದ ಮುಖ್ಯ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ ರವರ ಪೌರೋಹಿತ್ಯದಲ್ಲಿ ಲಾಲ ಶ್ರೀ ರಾಘವೇಂದ್ರ ಮಠದಲ್ಲಿ ಜೂ.೯ರಂದು ಮೂಲ ರಾಮ ಸಹಿತ ಶ್ರೀ ರಾಘವೇಂದ್ರ ಗುರುಗಳ ಮತ್ತು ಆಂಜನೇಯ ಸ್ವಾಮಿಗಳ ಬೃಂದಾವನದ ದೃಢಕಲಶ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ, ಬ್ರಹ್ಮಕಲಶೋತ್ಸವದ ಅಧ್ಯಕ್ಷ ರಕ್ಷಿತ್ ಶಿವರಾಮ್, ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿ ಶ್ರವಣ್ರಾಜ್, ಟ್ರಸ್ಟಿಗಳಾದ ಸೋಮೇಗೌಡ, ಪ್ರೊ. ಕೃಷ್ಣಪ್ಪ ಪೂಜಾರಿ, ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ಸುಶೀಲಾ ಹೆಗಡೆ, ಗೌರವ ಸಲಹೆಗಾರರಾದ ಡಾ. ಬಿ.ಎ. ಕುಮಾರ ಹೆಗಡೆ, ಶ್ರೀ ಮಂಜುನಾಥ ರೈ, ಹಿರಿಯರಾದ ವಿಠಲ್ ಶೆಟ್ಟಿ, ನಿವೃತ್ತ ಎಸ್ಪಿ ಮಿತ್ರ ಹೇರಾಜೆ, ಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ ಲಾಯಿಲ, ನಾರಾಯಣ ಮಚ್ಚಿನ, ಶ್ರೀಮತಿ ಲತಾ ಶಿವರಾಮ್, ಶ್ರೀಮತಿ ವಾರಿಜಾ ಸುವರ್ಣ, ಶ್ರೀಮತಿ ಸೌಮ್ಯ ಲಾಯಿಲ, ಶ್ರೀಮತಿ ಶಾಂಭವಿ ಬಂಗೇರ, ಜಯಾನಂದ ಲಾಲ, ಜಯಪ್ರಕಾಶ್ ಶೆಟ್ಟಿ ಹಾಗೂ ಭಕ್ತರು ಉಪಸ್ಥಿತರಿದ್ದರು.