23.7 C
ಪುತ್ತೂರು, ಬೆಳ್ತಂಗಡಿ
June 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ನಾಮಫಲಕದಲ್ಲಿ ಯಡವಟ್ಟು: ಕೂಡಲೇ ಸರಿಪಡಿಸುವಂತೆ ಆಗ್ರಹ

ಮಚ್ಚಿನ : ಇಲ್ಲಿಯ ಮುಡಿಪಿರೆ ಯಿಂದ ನಾಳ ಹಾಗೂ ಮುಡಿಪಿರೆ ಯಿಂದ ಕುವೆಟ್ಟು ರಸ್ತೆಗಳು ಇತ್ತೀಚಿಗೆ ಕಾಂಕ್ರೀಟ್ ಗೊಂಡು ಲೋಕೋಪಯೋಗಿ ಇಲಾಖೆಯಿಂದ ಮಾರ್ಗಸೂಚಿ ನಾಮಫಲಕ ಹಾಕಲಾಗಿದೆ. ಆದರೆ ಅದರಲ್ಲಿ ಊರ ಹೆಸರುಗಳನ್ನು ತಪ್ಪಾಗಿ ಮುದ್ರಿಸಿ ಊರ ಜನರನ್ನು ರೊಚ್ಚಿಗೆಲ್ವಂತೆ ಮಾಡಿದೆ.

ಇರಬೇಕಾದ ಹೆಸರುಗಳು ದೇವರಗುಂಡಿ, ಬರೆಮೇಲು, ಮರ್ಕೆ, ಪುರಳಿ, ಪಂಚಮಲಕೋಡಿ, ಬಿಳಿ ಬೈಲು,
ತಿಮ್ಮನೊಟ್ಟು, ನಾಳ, ದತ್ತ ನಗರ ಕುತ್ತಿನ, ಮುದಲಡ್ಕ ಪಯ್ಯೊಟ್ಟು, ಸಬರಬೈಲು, ಕುವೆಟ್ಟು, ಎಂದು ಆಗಬೇಕು. ಆದರೆ
ರಸ್ತೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ವಿಚಿತ್ರವಾದ ಹೆಸರುಗಳನ್ನು ಬರೆದು ದಾರಿ ತಪ್ಪುವಂತೆ ಮಾಡಿದೆ.

ಈ ನಾಮಫಲಕವನ್ನು ತಕ್ಷಣ ಬದಲಾವಣೆಗೊಳಿಸುವಂತೆ ಇಲಾಖೆಯಲ್ಲಿ ಊರ ಜನರ ಒತ್ತಾಯವಾಗಿದೆ. ( ಜನರು ಕೇಳುವಂತ ಪ್ರಶ್ನೆ ಒಂದು ಮಗುವಿನ ಹೆಸರಿನ ಒಂದು ಅಕ್ಷರವನ್ನು ತಿದ್ದುಪಡಿ ಮಾಡಲು ಶಾಲೆ ಲಾಯರ್ ಕೋರ್ಟು ಕಚೇರಿ ಹೀಗೆ 6ತಿಂಗಳು ಅಲೆದಾಡಿದರು ಸರಿಯಾಗುವುದಿಲ್ಲ ಆದರೆ ಲೋಕೋಪಯೋಗಿ ಇಲಾಖೆ , ಕ್ಷಣಮಾತ್ರದಲ್ಲಿ ಒಂದು ಊರಿನ ಹೆಸರನ್ನು ಬದಲಾವಣೆ ಮಾಡುತ್ತದೆ ಎಂದು ) ಒಟ್ಟಿನಲ್ಲಿ ಮಾರ್ಗಸೂಚಿ ಸರಿಯಾಗಿದ್ದರೆ ಜನರು ದಾರಿ ತಪ್ಪದಂತೆ ಮಾಡಬಹುದು.
✍️ವರದಿ: ಹರ್ಷ ಬಳ್ಳಮಂಜ

Related posts

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 50453 ಅಂತರದಿಂದ ಭಾರಿ ಮುನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹಿನ್ನಡೆ

Suddi Udaya

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ

Suddi Udaya

ಬಳಂಜ ಸ.ಹಿ.ಪ್ರಾ. ಶಾಲೆಯ ಅಭಿವೃದ್ಧಿಗೆ ರೂ. 2.00 ಕೋಟಿ ಅನುದಾನ ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜರಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾದ್ಯಮ (ರಾಜ್ಯ ಪಠ್ಯಾಕ್ರಮ) ಶಾಲೆಯಲ್ಲಿ ಹೊಸ ವರ್ಷ ಆಚರಣೆ

Suddi Udaya

ಬಂದಾರು ಸ.ಹಿ.ಉ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!