July 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ನಾಮಫಲಕದಲ್ಲಿ ಯಡವಟ್ಟು: ಕೂಡಲೇ ಸರಿಪಡಿಸುವಂತೆ ಆಗ್ರಹ

ಮಚ್ಚಿನ : ಇಲ್ಲಿಯ ಮುಡಿಪಿರೆ ಯಿಂದ ನಾಳ ಹಾಗೂ ಮುಡಿಪಿರೆ ಯಿಂದ ಕುವೆಟ್ಟು ರಸ್ತೆಗಳು ಇತ್ತೀಚಿಗೆ ಕಾಂಕ್ರೀಟ್ ಗೊಂಡು ಲೋಕೋಪಯೋಗಿ ಇಲಾಖೆಯಿಂದ ಮಾರ್ಗಸೂಚಿ ನಾಮಫಲಕ ಹಾಕಲಾಗಿದೆ. ಆದರೆ ಅದರಲ್ಲಿ ಊರ ಹೆಸರುಗಳನ್ನು ತಪ್ಪಾಗಿ ಮುದ್ರಿಸಿ ಊರ ಜನರನ್ನು ರೊಚ್ಚಿಗೆಲ್ವಂತೆ ಮಾಡಿದೆ.

ಇರಬೇಕಾದ ಹೆಸರುಗಳು ದೇವರಗುಂಡಿ, ಬರೆಮೇಲು, ಮರ್ಕೆ, ಪುರಳಿ, ಪಂಚಮಲಕೋಡಿ, ಬಿಳಿ ಬೈಲು,
ತಿಮ್ಮನೊಟ್ಟು, ನಾಳ, ದತ್ತ ನಗರ ಕುತ್ತಿನ, ಮುದಲಡ್ಕ ಪಯ್ಯೊಟ್ಟು, ಸಬರಬೈಲು, ಕುವೆಟ್ಟು, ಎಂದು ಆಗಬೇಕು. ಆದರೆ
ರಸ್ತೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ವಿಚಿತ್ರವಾದ ಹೆಸರುಗಳನ್ನು ಬರೆದು ದಾರಿ ತಪ್ಪುವಂತೆ ಮಾಡಿದೆ.

ಈ ನಾಮಫಲಕವನ್ನು ತಕ್ಷಣ ಬದಲಾವಣೆಗೊಳಿಸುವಂತೆ ಇಲಾಖೆಯಲ್ಲಿ ಊರ ಜನರ ಒತ್ತಾಯವಾಗಿದೆ. ( ಜನರು ಕೇಳುವಂತ ಪ್ರಶ್ನೆ ಒಂದು ಮಗುವಿನ ಹೆಸರಿನ ಒಂದು ಅಕ್ಷರವನ್ನು ತಿದ್ದುಪಡಿ ಮಾಡಲು ಶಾಲೆ ಲಾಯರ್ ಕೋರ್ಟು ಕಚೇರಿ ಹೀಗೆ 6ತಿಂಗಳು ಅಲೆದಾಡಿದರು ಸರಿಯಾಗುವುದಿಲ್ಲ ಆದರೆ ಲೋಕೋಪಯೋಗಿ ಇಲಾಖೆ , ಕ್ಷಣಮಾತ್ರದಲ್ಲಿ ಒಂದು ಊರಿನ ಹೆಸರನ್ನು ಬದಲಾವಣೆ ಮಾಡುತ್ತದೆ ಎಂದು ) ಒಟ್ಟಿನಲ್ಲಿ ಮಾರ್ಗಸೂಚಿ ಸರಿಯಾಗಿದ್ದರೆ ಜನರು ದಾರಿ ತಪ್ಪದಂತೆ ಮಾಡಬಹುದು.
✍️ವರದಿ: ಹರ್ಷ ಬಳ್ಳಮಂಜ

Related posts

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಹರೀಶ್ ಪೂಂಜ ಅವರ ಹುಟ್ಟು ಹಬ್ಬ ಆಚರಣೆ

Suddi Udaya

ಕೊಕ್ಕಡ ಗ್ರಾ.ಪಂ. ನಲ್ಲಿ ಉದ್ಯೋಗಕಾತರಿ ಯೋಜನೆಯಡಿ ಆರೋಗ್ಯ ತಪಾಸಣಾ ಶಿಬಿರ

Suddi Udaya

ಜಿಲ್ಲಾಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ: ವೇಣೂರು ಸ. ಪ್ರೌಢ ಶಾಲಾ ವಿದ್ಯಾರ್ಥಿ ಅನ್ವಿತಾ ಎ ಪ್ರಥಮ ಸ್ಥಾನ

Suddi Udaya

ಉಜಿರೆ:ಕಾಲಭೈರವ ಆರ್ಕೇಡ್ ನಲ್ಲಿ ಸಮೃದ್ದಿ ಟ್ರೇಡರ್ಸ್ ದಿನಸಿ ಮಳಿಗೆ ಶುಭಾರಂಭ

Suddi Udaya

ವೇಣೂರು ಐಟಿಐ ಕಾಲೇಜಿನಲ್ಲಿ ಯುವ ಮತ್ತು ಭವಿಷ್ಯದ ಮತದಾರರೊಂದಿಗೆ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ ಸಂವಾದ

Suddi Udaya

ಬೆಂಗಳೂರುನಲ್ಲಿರುವ ಯೂಟ್ಯೂಬರ್ ಸಮೀರ್ ಎಮ್.ಡಿ ಮನೆಯನ್ನು ಸುತ್ತುವರಿದ ಧರ್ಮಸ್ಥಳ ಪೊಲೀಸರು

Suddi Udaya
error: Content is protected !!