ಬೆಳ್ತಂಗಡಿ ಧರ್ಮಪ್ರಾಂತ್ಯದ ಅಡಿಯಲ್ಲಿರುವ ಎಲ್ಲ ಶಾಲಾ ಅಧ್ಯಾಪಕರ ಪುನಃಶ್ಚೇತನ ಶಿಬಿರವು ಜೂ. 14ರಂದು ಧರ್ಮಪ್ರಾಂತ್ಯದ ಪಾಲನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.

ಶಿಬಿರದಲ್ಲಿ ಕರ್ನಾಟಕ ರಾಜ್ಯ ಅಧ್ಯಾಪಕ ಪ್ರಶಸ್ತಿ ವಿಜೇತ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಮೆಂಬರ್ ಹಾಗೂ ಕರ್ನಾಟಕ ಕಥೊಲಿಕ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವಂದನೀಯ ಫಾ. ಫ್ರಾನ್ಸಿಸ್ ಅಲ್ಮೇಡಾರವರು ಅಧ್ಯಾಪಕ ವೃತ್ತಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
“ಕಾಲಕ್ಕನುಗುಣವಾಗಿ ಅಧ್ಯಾಪಕರು ಬದಲಾಗಬೇಕಾಗಿದೆ. ಮಕ್ಕಳ ಈ ಕಾಲದ ವರ್ತನೆಗಳನ್ನು ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡುವುದು ಅಗತ್ಯ. ಕೋವಿಡ್ 19 ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಅರಿತು ಬಗೆಹರಿಸುವುದು ಅಗತ್ಯದ ಕಾರ್ಯವಾಗಿದೆ” ಎಂದು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಹೇಳಿದರು.
ಶಿಬಿರದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರು ಶತಮಾನ ಫಲಿತಾಂಶವನ್ನು ಪಡೆದ ಬಂಗಾಡಿ, ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕರನ್ನು, ಅದೇ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿರುವ ಶ್ರೀಮತಿ ಸುಲೋಚನಾ ಇವರನ್ನು ಹಿಂದಿ ವಿಷಯದಲ್ಲಿ ಮಕ್ಕಳ ಅಸಾಧಾರಣ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವಂದನೀಯ ಫಾ. ಶಾಜಿ ಮಾತಿಯೂ ಶಿಬಿರವನ್ನು ಸಮನ್ವಯಗೊಳಿಸಿದರು. ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಿದರು.