July 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ನಾಮಫಲಕದಲ್ಲಿ ಯಡವಟ್ಟು: ಕೂಡಲೇ ಸರಿಪಡಿಸುವಂತೆ ಆಗ್ರಹ

ಮಚ್ಚಿನ : ಇಲ್ಲಿಯ ಮುಡಿಪಿರೆ ಯಿಂದ ನಾಳ ಹಾಗೂ ಮುಡಿಪಿರೆ ಯಿಂದ ಕುವೆಟ್ಟು ರಸ್ತೆಗಳು ಇತ್ತೀಚಿಗೆ ಕಾಂಕ್ರೀಟ್ ಗೊಂಡು ಲೋಕೋಪಯೋಗಿ ಇಲಾಖೆಯಿಂದ ಮಾರ್ಗಸೂಚಿ ನಾಮಫಲಕ ಹಾಕಲಾಗಿದೆ. ಆದರೆ ಅದರಲ್ಲಿ ಊರ ಹೆಸರುಗಳನ್ನು ತಪ್ಪಾಗಿ ಮುದ್ರಿಸಿ ಊರ ಜನರನ್ನು ರೊಚ್ಚಿಗೆಲ್ವಂತೆ ಮಾಡಿದೆ.

ಇರಬೇಕಾದ ಹೆಸರುಗಳು ದೇವರಗುಂಡಿ, ಬರೆಮೇಲು, ಮರ್ಕೆ, ಪುರಳಿ, ಪಂಚಮಲಕೋಡಿ, ಬಿಳಿ ಬೈಲು,
ತಿಮ್ಮನೊಟ್ಟು, ನಾಳ, ದತ್ತ ನಗರ ಕುತ್ತಿನ, ಮುದಲಡ್ಕ ಪಯ್ಯೊಟ್ಟು, ಸಬರಬೈಲು, ಕುವೆಟ್ಟು, ಎಂದು ಆಗಬೇಕು. ಆದರೆ
ರಸ್ತೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ವಿಚಿತ್ರವಾದ ಹೆಸರುಗಳನ್ನು ಬರೆದು ದಾರಿ ತಪ್ಪುವಂತೆ ಮಾಡಿದೆ.

ಈ ನಾಮಫಲಕವನ್ನು ತಕ್ಷಣ ಬದಲಾವಣೆಗೊಳಿಸುವಂತೆ ಇಲಾಖೆಯಲ್ಲಿ ಊರ ಜನರ ಒತ್ತಾಯವಾಗಿದೆ. ( ಜನರು ಕೇಳುವಂತ ಪ್ರಶ್ನೆ ಒಂದು ಮಗುವಿನ ಹೆಸರಿನ ಒಂದು ಅಕ್ಷರವನ್ನು ತಿದ್ದುಪಡಿ ಮಾಡಲು ಶಾಲೆ ಲಾಯರ್ ಕೋರ್ಟು ಕಚೇರಿ ಹೀಗೆ 6ತಿಂಗಳು ಅಲೆದಾಡಿದರು ಸರಿಯಾಗುವುದಿಲ್ಲ ಆದರೆ ಲೋಕೋಪಯೋಗಿ ಇಲಾಖೆ , ಕ್ಷಣಮಾತ್ರದಲ್ಲಿ ಒಂದು ಊರಿನ ಹೆಸರನ್ನು ಬದಲಾವಣೆ ಮಾಡುತ್ತದೆ ಎಂದು ) ಒಟ್ಟಿನಲ್ಲಿ ಮಾರ್ಗಸೂಚಿ ಸರಿಯಾಗಿದ್ದರೆ ಜನರು ದಾರಿ ತಪ್ಪದಂತೆ ಮಾಡಬಹುದು.
✍️ವರದಿ: ಹರ್ಷ ಬಳ್ಳಮಂಜ

Related posts

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಭೇಟಿ ಮಾಡಿದ ಮಾಜಿ ಶಾಸಕ ಕೆ. ವಸಂತ ಬಂಗೇರ

Suddi Udaya

ಮುಗೇರಡ್ಕ ನೆಕ್ಕರಾಜೆ ನಿವಾಸಿ ವಿಶ್ವನಾಥ್ ಗೌಡ ನಿಧನ

Suddi Udaya

ಪದ್ಮುಂಜ: 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರ ಉದ್ಘಾಟನೆ

Suddi Udaya

ನಡ ಗ್ರಾಮ ಪಂಚಾಯಿತಿಯ ಮಕ್ಕಳ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ತರಬೇತಿಯ ಸಮಾರೋಪ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya
error: Content is protected !!