ಕೊಯ್ಯೂರು:”ಸಂಸ್ಕೃತಿ -ಸಂಸ್ಕಾರಗಳಿಂದ ಕೂಡಿದ ಶಿಕ್ಷಣ ಮನುಷ್ಯನನ್ನು ಜೀವನದಲ್ಲಿ ಉತ್ತುಂಗದೆಡೆ ಒಯ್ಯು ತ್ತದೆ. ಸಂಸ್ಕಾರರಹಿತ ಶಿಕ್ಷಣದಿಂದ ಸಮಾಜದ ಅದ:ಪತನವಾಗುತ್ತದೆ ”

ಎಂಬುದಾಗಿ ನಡ ಪದವಿಪೂರ್ವ ಕಾಲೇಜ್ ನ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪ ಡಿ. ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ತಚ್ಛಮೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳು ಸ್ವಾಗತಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಗೆ ನೀಡಿದ ಸ್ಮರಣಿಕೆ ಪಟ್ಟಿಯನ್ನು ಕುಮಾರಿ ಭಾವನಾ ಮತ್ತು ಸ್ಪರ್ಧಾ ವಿಜೇತರ ಪಟ್ಟಿಯನ್ನು ದ್ವಿತೀಯ ವಾಣಿಜ್ಯ ವಿಭಾಗದ ಸುಮಂತ್ ವಿಜೇತರ ಪಟ್ಟಿ ವಾಚಿಸಿದರು.ವಿದ್ಯಾರ್ಥಿನಿಯರಾದ ಪ್ರಜ್ಞಾ, ದೀಪಾಶ್ರೀ, ಯಜ್ಞಶ್ರೀ, ಕೀರ್ತಿ, ಕೃಪಾ, ಪೂಜಶ್ರೀಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ಕುಮಾರಿ ಸೌಜನ್ಯ ಸ್ವಾಗತಿಸಿ, ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗ ದ ಸೂರಜ್ ವಂದಿಸಿದರು. ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ಕುಮಾರಿ ವಿನಯ ಮತ್ತು ಚಿರಸ್ವಿ ಕಾರ್ಯಕ್ರಮ ನಿರ್ವಹಣೆ ಗೈದರು. ಉಪನ್ಯಾಸಕರಾದ ಶ್ರೀಮತಿ ರಶ್ಮಿದೇವಿ, ಶ್ರೀ ಲಕ್ಷ್ಮಣ ಗೌಡ,ಶ್ರೀಮತಿ ಭವ್ಯ, ಶ್ರೀಮತಿ ತೃಪ್ತಿ, ಶ್ರೀ ಸಂತೋಷ್ ಕುಮಾರ್, ಶ್ರೀಮತಿ ಪವಿತ್ರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.