ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು – ವಿಲ್ಲುಂಪುರದ ಬೆಳ್ತಂಗಡಿ-ಉಜಿರೆ ರಸ್ತೆಯ ಲಾಯಿಲದಲ್ಲಿ ಅಪಾಯಕಾರಿ ತಿರುವಿನ ಸೂಚನಫಲಕ ಕಾಣೆಯಾಗಿದ್ದು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ಹೌದು ಲಾಯಿಲದ ಪೆಟ್ರೋಲ್ ಬಂಕ್ ಬಳಿ ತಿರುವಿದ್ದು ಸೂಚನ ಫಲಕ ಅಳವಡಿಸಲಾಗಿತ್ತು ಆದರೆ ರಸ್ತೆ ಬದಿ ಗಿಡ ಗಂಟಿಗಳು ಬೆಳೆದು ಸೂಚನ ಫಲಕವನ್ನು ಬಳ್ಳಿಗಳು ಆವರಿಸಿಕೊಂಡು ಯಾರಿಗೂ ಗೋಚರಿಸದ್ದಂತೆ ಇದೆ. ಯಾವುದೇ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಅಪಾಯಕಾರಿ ತಿರುವಿನ ಬಳಿ ಅಪಾಯ ಸಂಭವಿಸುವ ಮೊದಲು ಸಮಸ್ಯೆಯನ್ನು ಪರಿಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಂದೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿದ್ದು ಅಧಿಕಾರಿಗಳು ಈ ಸೂಚನ ಫಲಕದತ್ತ ಗಮನಹರಿಸಬೇಕಿದೆ.











