July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರಿನ ಧೀಮಹಿಯಲ್ಲಿ ಭರತನಾಟ್ಯ ತರಗತಿಗಳ ಉದ್ಘಾಟನೆ

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನ ಮಹಾವೀರ ನಗರ ವೇಣೂರು ರಾಷ್ಟ್ರದೇವೋಭವ ಧೀಮಹಿ ನಾಟ್ಯ ವೃಂದ ವೇಣೂರು  ಭರತನಾಟ್ಯ ತರಗತಿಗಳ ಉದ್ಘಾಟನಾ ಸಮಾರಂಭವು ಶ್ರೀಮತಿ ಗೌರಮ್ಮ ನರಸಿಂಹ ಭಟ್,  ಉಪಸ್ಥಿತಿಯಲ್ಲಿ ಜೂ. 28ರಂದು  ನೆರವೇರಿತು.

ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ವಿದುಷಿ ಶ್ರೀಮತಿ ಶಾರದಾ ಮಣಿ ಶೇಖರ್ ಸನಾತನ ನಾಟ್ಯಲಯ ಮಂಗಳೂರು ಇವರು ಮಾತನಾಡುತ್ತ ಭಾರತೀಯ ನಾಟ್ಯ ಪರಂಪರೆಗಳಲ್ಲಿ ಭರತನಾಟ್ಯಕ್ಕೆ ಅಗ್ರಸ್ಥಾನ ಇದನ್ನು ಅಭ್ಯಾಸೀಸಬೇಕಾದರೆ ಅತಿಯಾದ ತಾಳ್ಮೆ ಸುದೀರ್ಘ ಅಭ್ಯಾಸ ಅತ್ಯಗತ್ಯ. ತನ್ನ ಗರಡಿಯಲ್ಲಿ ಪಳಗಿದ ಅನೇಕ ಭರತನಾಟ್ಯ ವಿದುಷಿಯರನ್ನು ಸ್ಮರಿಸುತ್ತಾ ಬಾಲ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ ಆಶೀರ್ವದಿಸಿದರು.  

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಂಗಭೂಮಿ ಕಲಾವಿದರಾಗಿರುವ ನೇಮಯ್ಯ ಕುಲಾಲ್ ಮಾತನಾಡುತ್ತ ವೇಣೂರು ಪರಿಸರದ ಬಾಲ ಪ್ರತಿಭೆಗಳ ಅನಾವರಣದ ಮೂಲಕ  ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಧೀಮಹಿ ಪ್ರತಿಷ್ಠಾನ ಶ್ರಮಿಸುತ್ತಿದೆ ಎಂದರು.

ಭರತನಾಟ್ಯ ತರಗತಿಯನ್ನು ನಡೆಸಿಕೊಡುವ ನಾಟ್ಯ ಗುರು ವಿದುಷಿ ಶ್ರವಣಕುಮಾರಿ ಹಲ್ಲನ್ ದೋಣಿ ಇವರು ಮಾತನಾಡುತ್ತ ವಿದ್ಯಾರ್ಥಿಗಳು ಭರತನಾಟ್ಯ ಅಭ್ಯಾಸವನ್ನು ತುಂಬಾ ಶ್ರದ್ಧೆಯಿಂದ ತಾಳ್ಮೆಯಿಂದ ವಿಧೇಯತೆಯಿಂದ ಕಲಿತು ಕರಗತಗೊಳಿಸಬೇಕೆಂದು ನುಡಿದರು.


ಭರತನಾಟ್ಯ ಶಿಶಿಕ್ಷುಗಳು  ನಾಟ್ಯ ಗುರುಗಳಾದ ವಿದುಷಿ, ಶ್ರೀಮತಿ ಶಾರದಾ ಮಣಿ ಶೇಖರ್ ಹಾಗೂ ಶ್ರವಣಕುಮಾರಿ ಇವರಿಂದ ನಾಟ್ಯ ದೀಕ್ಷೆಯನ್ನು  ಪಡೆದರು. ಕುಮಾರ ಸಿದ್ಧಿವಿನಾಯಕ ಭಟ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಧೀಮಹಿ ಪ್ರತಿಷ್ಠಾನದ ಸಂಸ್ಥಾಪಕ ಯಜ್ಞನಾರಾಯಣ ಭಟ್ ಪ್ರಾಸ್ತಾವಿಕದೊಂದಿಗೆ   ಸ್ವಾಗತಿಸಿದರು. ಜಗನ್ನಾಥ್ ದೇವಾಡಿಗರು ನಿರೂಪಿಸಿದ ಕಾರ್ಯಕ್ರಮವನ್ನು ಶ್ರೀಮತಿ ಪ್ರಮೀಳಾ ದಿನೇಶ್ ಬೆಂಗಳೂರು ವಂದಿಸಿದರು.

Related posts

ಅಳದಂಗಡಿ: ಪ್ರಧಾನಿ ನರೇಂದ್ರ ಮೋದಿಯವರಿಂದ ಕಾರ್ಯಕರ್ತರ ಜೊತೆ ಸಂವಾದ

Suddi Udaya

ಕೊಕ್ಕಡ ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ಶ್ರೀ ಧ.ಮ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಉಜಿರೆ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಪುತ್ತಿಗೆ ಮಠದ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳರವರ ಭೇಟಿ

Suddi Udaya

ಅಂಡಿಂಜೆ: ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆ

Suddi Udaya

ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!