ಗುರುವಾಯನಕೆರೆ: ವಿಜಯ ರತ್ನ 2025 ಪ್ರಶಸ್ತಿ ವಿಜೇತರಾದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ, ಸದಸ್ಯರಾದ ಗೋಪಿನಾಥ್ ನಾಯಕ್, ಸತೀಶ್ ಬಂಗೇರ, ಶಾಂಭವಿ ಬಂಗೇರ, ಹರಿಪ್ರಸಾದ್ ಇರ್ವತ್ರಾಯ ಹಾಗೂ ರಾಜು ಪಡಂಗಡಿ ಜೊತೆಗಿದ್ದರು.











