ನಾವೂರು: ನಿನ್ನೆ (ಜು.8)ರಾತ್ರಿ ಸುರಿದ ಭಾರಿ ಮಳೆಗೆ ನಿoರ್ದಿ ರಸ್ತೆ ಬದಿಯ ಮರ ಬೆಳ್ತಂಗಡಿ -ಕಿಲ್ಲೂರು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದ ತಕ್ಷಣ ಗ್ರಾ.ಪಂ. ಮರ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಗಣೇಶ್ ಗೌಡ ನಾವೂರು ಹಾಗೂ ಪಂಚಾಯತ್ ಸದಸ್ಯ ಹಸೈನಾರ್, ಸ್ಥಳೀಯರಾದ ಎ.ಕೆ. ಅಬ್ಬಾಸ್, ಸತೀಶ್ ಸುವರ್ಣ, ಮಾಧವ ಗೌಡ ಒಳಗುಡ್ಡೆ, ಹಮೀದ್ ನಿoರ್ದಿ ರವರು ಮರವನ್ನು ತೇರವುಗೊಳಿಸಲು ಸಹಕರಿಸಿದರು.

ಸಾಲುಗಟ್ಟಿ ನಿಂತ ವಾಹನಗಳನ್ನು ಬದಲಿ ರಸ್ತೆಗಳಾದ ನವಗ್ರಾಮ ಜನತಾ ಕಾಲನಿ ಹಾಗೂ ಪಾಲೇದಬೆಟ್ಟು – ನಾವೂರು ರಸ್ತೆಯಲ್ಲಿ ಕಳಿಸಲಾಯಿತು.ರಸ್ತೆ ಬದಿಯಲ್ಲಿ ಹಲವಾರು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಈಗಾಗಲೇ ಗ್ರಾ.ಪಂ. ನಿಂದ ಮನವಿ ಮಾಡಿದ್ದು ಮರ ತೆರವುಗೊಳಿಸಲು ಅನುಮತಿ ನೀಡಿರುತ್ತಾರೆ.

ಸಾರ್ವಜನಿಕರಿಗೆ ತೊಂದರೆ ಆಗುವ ಮೊದಲು ಮರ ತೆರವು ಗೊಳಿಸಿ ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬೇಕಾಗಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಪಂಚಾಯತ್ ನ ಮನವಿಯಾಗಿದೆ.











