ವೇಣೂರು : ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಲೇಜಿನಲ್ಲಿ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ, ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಪ್ರತಿ ಶುಕ್ರವಾರ ಯೋಗ, ಸಂಗೀತ ಯಕ್ಷಗಾನ, ಕರಾಟೆ, ಡ್ಯಾನ್ಸ್ ತರಗತಿಗಳು ಪ್ರಾರಂಭಗೊAಡಿದ್ದು ಇದರ ಜೊತೆಗೆ ವಿದುಷಿ ಶ್ರೀಮತಿ ನಿಶಾ ಪ್ರಸಾದ್ ಇವರು ಭರತನಾಟ್ಯ ತರಗತಿಯನ್ನು ಪ್ರಾರಂಭಿಸುತ್ತಿದ್ದಾರೆ.
ಜು.8 ರಂದು ಜ್ಞಾನವಾಹಿನಿ ತಂಡದವರಾದ ರಾಧಿಕಾ ಶೆಟ್ಟಿ ಮತ್ತು ವಿದುಷಿ ನಿಶಾ ಪ್ರಸಾದ್ ಬಳಗದವರಿಂದ ೮ ಪ್ರಕಾರಗಳಲ್ಲಿ ಭರತನಾಟ್ಯ ನೃತ್ಯ ಮತ್ತು ಭರತನಾಟ್ಯ ಮುದ್ರೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಅಶ್ವಿತ್ ಕುಲಾಲ್ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











