ಕೊಕ್ಕಡ: ಸೌತಡ್ಕದಲ್ಲಿ ಜು.17ರಂದು ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ರವರ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತಮ್ಮ ಕೈಲಾದ ಧನಸಹಾಯವನ್ನು ನೀಡಿದರು.

ಮೃತರ ಪತ್ನಿಗೆ ಸೌತಡ್ಕದಲ್ಲಿ ಈಗಾಗಲೇ ಇರುವ ತಾತ್ಕಲಿಕ ಉದ್ಯೋಗವನ್ನು ಖಾಯಂಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೆ ಮೃತರ ಮಗಳಿಗೆ ಉನ್ನತ ಉದ್ಯೋಗವನ್ನು ಕೊಡಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭ ತುಕ್ರಪ್ಪ ಶೆಟ್ಟಿ ನೂಜೆ , ಗಣೇಶ್ ಕಲಾಯಿ ಉದ್ಯಮಿಗಳು, ಶ್ರೀನಾಥ್ ಬಡೆಕೈಲ್ , ಶಶಿ ಲಕ್ಷ್ಮಿ ಮೊಬೈಲ್ಸ್ ಕೊಕ್ಕಡ, ರಾಘವ ಭಂಡಾರಿ ಹಾಗೂ ಊರಿನವರು ಉಪಸ್ಥಿತರಿದ್ದರು.











