ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಲವು ವರ್ಷಗಳಿಂದ ಚಿನ್ನ ಪರಿಶೋಧಕರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯರವರು ಜು.21ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ಮನೆಗೆ ಆಧಾರಸ್ತಂಭವಾಗಿದ್ದ ಪದ್ಮನಾಭ ಆಚಾರ್ಯ ಅವರ ಮನೆಗೆ ಜು. 25ರಂದು ತೆರಳಿದ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ, ನಿರ್ದೇಶಕರಾದ ವಿಠಲ ಭಂಡಾರಿ, ಶ್ರೀನಾಥ್ ಬಡಕೈಲು,ಮುತ್ತಪ್ಪ ಕೊಕ್ಕಡ, ಉದಯ ಕುಮಾರ್ ಅನಾರು ,ಸುನಿಲ್ ಕೊಲ್ಲಾಜೆ, ಮಹಾಬಲ ಶೆಟ್ಟಿ ಪಟ್ಟೂರು, ವಿಶ್ವನಾಥ ಕಕ್ಕುದೋಳಿ, ಶ್ರೀಮತಿ ಪ್ರೇಮ ಕಲ್ಲಾಜೆ, ಶ್ರೀಮತಿ ರವಿ ಅಶ್ವಿನಿ ನಾಯ್ಕ್ ಓಣಿತಾರು, ಪದ್ಮನಾಭ ಕಾಯಿಲ, ರವಿಚಂದ್ರ ಪುಡ್ಕೇತ್ತೂರು ಸಂಘದ ವತಿಯಿಂದ ಧನಸಹಾಯವನ್ನು ಮನೆಯವರಿಗೆ ನೀಡಿದರು.











