
ಕಳೆಂಜ: ಶಿಬರಾಜೆಯ ಎಣ್ಣೆಗದ್ದೆ ಸಮೀಪ ಸುರಿದ ಭಾರಿ ಮಳೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು.
ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗದ ಕಾರಣ , ಊರಿನ ನಾಗರಿಕರಾದ ಹೊನ್ನಪ್ಪ ಗೌಡ ಎಣ್ಣೆಗದ್ದೆ, ಪದ್ಮನಾಭ ಎಣ್ಣೆಗದ್ದೆ, ಲಕ್ಷ್ಮಿ ನಾರಾಯಣ ಎಣ್ಣೆಗದ್ದೆ, ಧರ್ಣಪ್ಪ ಗೌಡ ವಳಂಬಲ, ಹರ್ಷಿತ್ ಎಣ್ಣೆಗದ್ದೆ, ರಮೇಶ್ ಗೌಡ ಎಣ್ಣೆಗದ್ದೆ, ಬಾಬು ಗೌಡ ಎಣ್ಣೆಗದ್ದೆ, ಇವರುಗಳ ಜತೆ ಶೌರ್ಯ ವಿಪತ್ತು ನಿರ್ವಹಣಾ ಶಿಶಿಲ,-ಅರಸಿನಮಕ್ಕಿ ಘಟಕದ ಹರೀಶ್ ಕುಮಾರ್ ವಳಗುಡ್ಡೆ ಸೇರಿಕೊಂಡು ರಸ್ತೆಗೆ ಕಲ್ಲಿನ ತಡೆಗೋಡೆ ನಿರ್ಮಿಸಲಾಯಿತು.












