25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್, ಕಾರ್ಯದರ್ಶಿಯಾಗಿ ಹಾರಿಶ್ ಆಯ್ಕೆ

ಬೆಳ್ತಂಗಡಿ : ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಮಹಾಸಭೆಯು ಜು.25 ರಂದು ಮಸೀದಿಯಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ದೇಶನದಂತೆ ಮರ್ಹೂಮ್ ಕೂರತ್ ತಂಙಳ್ ಸುಪುತ್ರ ಅಸ್ಸಯ್ಯದ್ ಮಸ್ ಹೂದ್ ಅಲ್-ಬುಖಾರಿ ಅಲ್ ಅಝ್ಹರಿ ತಂಙಳ್ ಗೌರವಾದ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುದರ್ರಿಸ್ ಯಾಸಿನ್ ಸಖಾಫಿ ಅಲ್ ಹಿಕಮಿ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಶ್ ಕುಕ್ಕುಡಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಮುಂದಿನ ಮೂರು ವರ್ಷದ ಅವಧಿಗೆ ಹೊಸ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್ ಕಜೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಶ್ ಕುಕ್ಕುಡಿ, ಕೋಶಾಧಿಕಾರಿಯಾಗಿ ಉದ್ಯಮಿ ಸಂಶುದ್ದೀನ್ ಜೆ, ಉಪಾಧ್ಯಕ್ಷರುಗಳಾಗಿ ಹಾಜಿ ಇಸ್ಮಾಯಿಲ್ ಪರಿಮ, ಮಹಮ್ಮದ್ ಗೋವಿಂದೂರು ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ನಡತ್ತೊಟ್ಟು, ಎನ್ ರಫೀಕ್, ಸದಸ್ಯರುಗಳಾಗಿ ಎನ್ ರಫೀಕ್ ಮುಸ್ಲಿಯಾರ್, ಹಾಫಿಳ್ ಅಬ್ದುಲ್ ಲತೀಫ್, ಹಾಜಿ ಅಬೂಬಕ್ಕರ್ ಪಳ್ಳಾದೆ, ಎಂ ಬಿ ಝಕರಿಯ ಮುಸ್ಲಿಯಾರ್, ಕಾಸಿಂ ನಾಳ, ಅಬ್ದುಲ್ ಕರೀಮ್ ನಾಳ, ಇಸ್ಮಾಯಿಲ್ ಎಲ್ತ್ರಡ್ಕ,ಕೆ.ಎಸ್.ಅಬ್ದುಲ್ ರಹಿಮಾನ್ ಕುಕ್ಕುಡಿ, ಮಹಮ್ಮದ್ ಕುಕ್ಕುಡಿ, ಉಮ್ಮರ್ ಕುಂಙಿ ಮೈಲಿಗಲ್ಲು,ಆದಂ ಮುಂಚಳಿಕೆ, ಇಕ್ಬಾಲ್ ಪೈಂಟರ್,ಹೈದರ್ ಎಲ್ತ್ರಡ್ಕ, ಉಮ್ಮರ್ ಪಳ್ಳಾದೆ ಆಯ್ಕೆ ಯಾದರು.

Related posts

ಬೆಂಗಳೂರು ಜೈ ತುಲುನಾಡ್ ನೇತೃತ್ವದಲ್ಲಿ ತುಲುನಾಡ ಆಟಿ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭಾಗಿ

Suddi Udaya

ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ಗುರುವಾಯನಕೆರೆ ವಿದ್ವತ್ ಕಾಲೇಜಿನಲ್ಲಿ ಕಿಚನಾಮಿಕ್ಸ್ ಸಡಗರ

Suddi Udaya

ಫೆ. 26ರಿಂದ ಮಾ.4: ಬೆಳಾಲು ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ

Suddi Udaya

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

Suddi Udaya

ಬಡಗಕಜೆಕಾರು: ಹರಿಶ್ಚಂದ್ರ ಪೂಜಾರಿ ಕನಪಾಡಿಬೆಟ್ಟು ನಿಧನ

Suddi Udaya
error: Content is protected !!