July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್, ಕಾರ್ಯದರ್ಶಿಯಾಗಿ ಹಾರಿಶ್ ಆಯ್ಕೆ

ಬೆಳ್ತಂಗಡಿ : ಜಾರಿಗೆಬೈಲು ಬದ್ರ್ ಜುಮ್ಮಾ ಮಸೀದಿಯ ಮಹಾಸಭೆಯು ಜು.25 ರಂದು ಮಸೀದಿಯಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ನಿರ್ದೇಶನದಂತೆ ಮರ್ಹೂಮ್ ಕೂರತ್ ತಂಙಳ್ ಸುಪುತ್ರ ಅಸ್ಸಯ್ಯದ್ ಮಸ್ ಹೂದ್ ಅಲ್-ಬುಖಾರಿ ಅಲ್ ಅಝ್ಹರಿ ತಂಙಳ್ ಗೌರವಾದ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುದರ್ರಿಸ್ ಯಾಸಿನ್ ಸಖಾಫಿ ಅಲ್ ಹಿಕಮಿ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಶ್ ಕುಕ್ಕುಡಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಮುಂದಿನ ಮೂರು ವರ್ಷದ ಅವಧಿಗೆ ಹೊಸ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹಾಜಿ ಕೆ.ಎಂ ಅಬೂಬಕ್ಕರ್ ಕಜೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಶ್ ಕುಕ್ಕುಡಿ, ಕೋಶಾಧಿಕಾರಿಯಾಗಿ ಉದ್ಯಮಿ ಸಂಶುದ್ದೀನ್ ಜೆ, ಉಪಾಧ್ಯಕ್ಷರುಗಳಾಗಿ ಹಾಜಿ ಇಸ್ಮಾಯಿಲ್ ಪರಿಮ, ಮಹಮ್ಮದ್ ಗೋವಿಂದೂರು ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ನಡತ್ತೊಟ್ಟು, ಎನ್ ರಫೀಕ್, ಸದಸ್ಯರುಗಳಾಗಿ ಎನ್ ರಫೀಕ್ ಮುಸ್ಲಿಯಾರ್, ಹಾಫಿಳ್ ಅಬ್ದುಲ್ ಲತೀಫ್, ಹಾಜಿ ಅಬೂಬಕ್ಕರ್ ಪಳ್ಳಾದೆ, ಎಂ ಬಿ ಝಕರಿಯ ಮುಸ್ಲಿಯಾರ್, ಕಾಸಿಂ ನಾಳ, ಅಬ್ದುಲ್ ಕರೀಮ್ ನಾಳ, ಇಸ್ಮಾಯಿಲ್ ಎಲ್ತ್ರಡ್ಕ,ಕೆ.ಎಸ್.ಅಬ್ದುಲ್ ರಹಿಮಾನ್ ಕುಕ್ಕುಡಿ, ಮಹಮ್ಮದ್ ಕುಕ್ಕುಡಿ, ಉಮ್ಮರ್ ಕುಂಙಿ ಮೈಲಿಗಲ್ಲು,ಆದಂ ಮುಂಚಳಿಕೆ, ಇಕ್ಬಾಲ್ ಪೈಂಟರ್,ಹೈದರ್ ಎಲ್ತ್ರಡ್ಕ, ಉಮ್ಮರ್ ಪಳ್ಳಾದೆ ಆಯ್ಕೆ ಯಾದರು.

Related posts

ಮಡಂತ್ಯಾರು ಮಂಡಲ ವತಿಯಿಂದ ಹಿಂದೂ ಸಂಗಮ; ಭವ್ಯ ಶೋಭಾಯಾತ್ರೆ

Suddi Udaya

ಮುಂಡಾಜೆ: ಸೈಂಟ್ ಮೇರಿಸ್ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಎಕ್ಸೆಲ್ ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ (ಎಸ್. ಟಿ. ಪಿ) ವಿಸ್ತರಿತ ಘಟಕದ ಭೂಮಿಪೂಜೆ

Suddi Udaya

ನಿಡಿಗಲ್ ನಲ್ಲಿ ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ: ಮಹಿಳೆ ಜಾರಿ ಬಿದ್ದಾಗ ತಲೆ ಭಾಗ ಸೀಳಿ ಹಾಕಿ ,ಕೈಗೆ ಗಂಭೀರ ಗಾಯಗೊಳಿಸಿದ ನಾಯಿ

Suddi Udaya
error: Content is protected !!