ಶಿಶಿಲ: ಇಂದು (ಆ. 5)ಸಂಜೆ ಪ್ರಾರಂಭವಾದ ಮಳೆ ಎಡೆಬಿಡದೆ ಬರುತ್ತಿದ್ದು ಶಿಶಿಲ ಪರಿಸರದಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.ಶಿಶಿಲೇಶ್ವರ ದೇವಸ್ಥಾನದೊಳಗೆ ನೀರು ನುಗ್ಗಿ ಪರಿಸ್ಥಿತಿ ಹದಗೆಟ್ಟಿರುತ್ತದೆ. ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ರಸ್ತೆಗೆ ಜರಿದು ಅರಸಿನಮಕ್ಕಿ- ಶಿಶಿಲ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಬರ್ಗುಳ ಎಂಬಲ್ಲಿ ಅರಣ್ಯದಿಂದ ಬರುವ ನೀರು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿ ಹೊಳೆಯಂತಾಗಿ ವಾಹನ ಸಂಚರಿಸಲು ಆಗದಂತ ಪರಿಸ್ಥಿತಿ ಉಂಟಾಗಿದೆ. ಮುಚ್ಚಿರಡ್ಕ ಕೃಷ್ಣಪ್ಪ ಗೌಡರವರ ಮನೆಯ ಬಳಿ ಗುಡ್ಡ ಜರಿದು ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ರಸ್ತೆ -ಹಳ್ಳ ತೋಡುಗಳು ನೀರಿನಿಂದ ತುಂಬಿವೆ.

ಪರಿಸ್ಥಿತಿಯನ್ನು ನಿಭಾಯಿಸಲು ಗ್ರಾ.ಪಂ. ಅಧ್ಯಕ್ಷ ಸುಧೀನ್, ಶೌರ್ಯ ವಿಪತ್ತು ನಿರ್ವಹಣಾ ತಂಡ, ಗ್ರಾ.ಪಂ ಹಾಗೂ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ರಸ್ತೆಗೆ ಬಿದ್ದ ಮಣ್ಣನ್ನು ತೆಗೆಯಲು ಹಿಟಾಚಿ ಮೂಲಕ ಪ್ರಯತ್ನಿಸಲಾಗುತ್ತಿದೆ.ಅರಸಿನಮಕ್ಕಿಯಿಂದ ಬೂಡುಮುಗೇರು ಕಡೆ ಬರುವಲ್ಲಿ ಕೂಡಾ ಬರೆ ಜರಿದು ರಸ್ತೆಗೆ ಮಣ್ಣು ಬಿದ್ದಿದ್ದೆ. ಪಟ್ರಮೆ ಮಸೀದಿ ಬಳಿ ನದಿ ನೀರು ರಸ್ತೆಗೆ ಬಂದಿರುತ್ತದೆ. ಮಣಿಯೇರು ರಸ್ತೆ, ಕೂಟೇಲು ಬಳಿ ನೀರು ತುಂಬಿ ಸಂಪರ್ಕ ಕಡಿದಿದೆ.











