23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಟ್ರಮೆ: ರಸ್ತೆ ಅಭಿವೃದ್ದಿಗಾಗಿ ಹೋರಾಟ ಸಮಿತಿ ರಚನೆ

ಪಟ್ರಮೆ : ಇಲ್ಲಿಯ ಕೂಟೇಲು – ಸಂಕೇಶ – ಮಣಿಯೇರು ಪರಿಶಿಷ್ಟ ಜಾತಿ ಕಾಲೊನಿ ಪಂಚಾಯತ್ ರಸ್ತೆಯ ಅವ್ಯವಸ್ಥೆಗೆ ಪರಿಹಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿಯೂ ಸ್ಪಂದನೆ ಸಿಗದ ಕಾರಣ ಈ ಬಗ್ಗೆ ರಸ್ತೆ ಅಭಿವೃದ್ದಿಗಾಗಿ ಹೋರಾಟದ ಹಾದಿ ಹಿಡಿಯಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಆ. 10 ರಂದು ಸಂಜೆ ಬದಿಪಲ್ಕೆ ಶಾಲಾ ಬಳಿ ಗ್ರಾಮಸ್ಥರು ಸಭೆ ಸೇರಿ ರಸ್ತೆ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಪುಟ್ಟಣ್ಣ ಮಣಿಯೇರು, ಉಪಾಧ್ಯಕ್ಷರಾಗಿ ಗಿರೀಶ್ ಮಣಿಯೇರು, ಕಾರ್ಯದರ್ಶಿಯಾಗಿ ಮನೀಷ್ ಬರ್ಕಳ, ಜೊತೆಕಾರ್ಯದರ್ಶಿಯಾಗಿ ಶಿವಪ್ಪ ಕಲ್ಲಡೇಲು ಆಯ್ಕೆ ಆಗಿ , ಇವರೂ ಸೇರಿದಂತೆ ಒಟ್ಟು 13 ಜನರ ಸಮಿತಿ ರಚಿಸಲಾಯಿತು. ಸಲಹೆಗಾರರಾಗಿ ಶ್ಯಾಮರಾಜ್ ಪಟ್ರಮೆ ಮತ್ತು ಧನಂಜಯ ಪಟ್ರಮೆ ಆಯ್ಕೆಯಾದರು. ಸಮಿತಿಯಲ್ಲಿ ಸದಸ್ಯರಾಗಿ ಗಣೇಶ್ ಶೀಮುಳ್ಳು, ಕೋಟ್ಯಪ್ಪ ಸಂಕೇಶ, ಚಿನ್ನಯ ಹೆಂಗಾಜೆ, ಶಿರೀಷ್ ರಾಜ್, ಆನಂದ ಮಣಿಯೇರು, ಸತೀಶ್, ಕಿಟ್ಟು , ಪುನೀತ್ ಮತ್ತು ಶಶಿಧರ ಆಯ್ಕೆ ಆಗಿರುತ್ತಾರೆ.‌


ಪಂಚಾಯತ್, ಗ್ರಾಮಸಭೆಗಳು, ತಾ.ಪಂ, ಜಿ.ಪಂ, ಶಾಸಕರು, ಸಂಸದರು, ಗ್ರಾಮೀಣಾಭಿವೃದ್ದಿ ಸಚಿವರು ಎಲ್ಲಾಕಡೆ ಹಲವು ಬಾರಿ ಹಲವು ಜನ ಮನವಿ ಕೊಡುತ್ತನೇ ಬಂದರೂ ಕೊನೆಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಪತ್ರ ಬರೆದಿದ್ದರೂ ರಸ್ತೆ ಅಭಿವೃದ್ದಿಗೆ ಅನುದಾನ ಒದಗಿಲ್ಲ. ಪ್ರತೀ ಚುನಾವಣೆ ಸಂದರ್ಭದಲ್ಲಿ ಭರವಸೆ ಕೊಟ್ಟು ನಂತರ ಮರೆಯುತ್ತಾರೆ. ಆದ್ದರಿಂದ ಇನ್ನು ಮನವಿ ಸಲ್ಲಿಸುವ ಬದಲು ಹೋರಾಟದ ಹಾದಿ ಹಿಡಿಯುವುದಾಗಿ ಸೇರಿದ್ದ ಗ್ರಾಮಸ್ಥರ ಒಕ್ಜೊರಲ ಅಭಿಪ್ರಾಯ ಕೇಳಿಬಂತು. ಮತದಾನ ಬಹಿಷ್ಕಾರದ ಅಭಿಪ್ರಾಯವೂ ಕೇಳಿಬಂತು.


ಹೋರಾಟ ಸಮಿತಿಯು ಆ. 11 ರಂದು ಕಾರ್ಯಾರಂಭವಾಗಿದ್ದು, ಪ್ರಥಮವಾಗಿ ಸದ್ರಿ ರಸ್ತೆಯನ್ನು ಸಂಚರಿಸಲು ಸಾಧ್ಯವಾಗುವ ರೀತಿಯಲ್ಲಿ ಪಂಚಾಯತ್ ತುರ್ತಾಗಿ ಜಲ್ಲಿ ಕಲ್ಲು ಮತ್ತು ಕಲ್ಲಿನ ಪುಡಿ ಮಿಶ್ರಣ ಹಾಕಿಸಿಕೊಡಬೇಕೆಂದು ಒತ್ತಾಯಿಸಿ ಮತ್ತು ಸಂಪೂರ್ಣ ರಸ್ತೆಯನ್ನು12 ಅಡಿ ಅಗಲದಲ್ಲಿ ಕಾಂಕ್ರಿಟೀಕರಣ ಮಾಡಿ ಅಭಿವೃದ್ದಿ ಮಾಡಲು ಅಗತ್ಯ ಇರುವ ಕನಿಷ್ಟ ಮೂರು ಕೋಟಿ ರೂ ಅನುದಾನ ಸರಕಾರದಿಂದ ಒದಗುವಂತೆ ಮಾಡಲು ಒತ್ತಾಯಿಸಿ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಪಂಚಾಯತ್ ನಲ್ಲಿ ಸ್ಪಂದನೆ ಸಿಗದೇ ಹೋದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಲು ಸಮಿತಿ ನಿರ್ಣಯಿಸಿದೆ.

ಕೂಟೇಲು, ಬದಿಪಲ್ಕೆ, ಸಂಕೇಶ, ಶೀಮುಳ್ಳು, ಮಣಿಯೇರು ಮೊದಲಾದ ಪ್ರದೇಶಗಳಿಂದ ಸುಮಾರು 50 ಕ್ಕೂ ಹೆಚ್ಚು ಜನ ಸೇರಿದ್ದ ಈ ಸಭೆಯಲ್ಲಿ ಜಾರಪ್ಪ ಗೌಡರು ಅಧ್ಯಕ್ಷತೆ ವಹಿಸಿದ್ದರು, ಗಿರೀಶ್ ಸ್ವಾಗತಿಸಿ , ಮನೀಶ್ ಧನ್ಯವಾದವಿತ್ತರು.

Related posts

ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹುದ್ದೆಗೆ ಗೇರುಕಟ್ಟೆಯ ಹಿದಾಯತುಲ್ಲಾ ಕೆ.ಎ ಆಯ್ಕೆ

Suddi Udaya

ಶಿರ್ಲಾಲು ಸ.ಉ.ಪ್ರಾ. ಶಾಲೆಯ ಮಕ್ಕಳಿಗೆ ವಕೀಲರು ಮುರುಳಿ ಬಿ. ರವರಿಂದ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಳದಂಗಡಿ ಸ.ಪ.ಪೂ. ಕಾಲೇಜಿಗೆ ಕಂಪ್ಯೂಟರ್ ಸ್ಮಾರ್ಟ್ ತರಗತಿ ಉದ್ಘಾಟನೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ “ವನ್ ಮಿನಿಟ್ ಉಮಾ”ರಿಂದ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ

Suddi Udaya

ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya

ನಿಟ್ಟಡೆ ಕುಂಭಶ್ರೀ ಪದವಿಪೂರ್ವ ಕಾಲೇಜಿನಲ್ಲಿ SPECTRUM -2025 ಫ್ರೆಶರ್ಸ್ ಡೇ ಕಾರ್ಯಕ್ರಮ

Suddi Udaya
error: Content is protected !!