ಬೆಳ್ತಂಗಡಿ: ಇಲ್ಲಿಯ ಮುಳಿಯ ಜುವೆಲ್ಸ್ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಸಂಭ್ರಮದಿಂದ ನಡೆಯಿತು.
ಧ್ವಜರೋಹಣವನ್ನು ಸುದ್ದಿ ಉದಯ ಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸುದ್ದಿ ಉದಯ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ತುಕಾರಾಮ್., ಜಿಯೋ ಮೊಬೈಲ್ ಕಂಪೆನಿಯ ಮ್ಯಾನೇಜರ್ ಕಿರಣ್ ಕುಮಾರ್ ಶೆಟ್ಟಿ, ಮುಳಿಯ ಸಂಸ್ಥೆಯ ಮ್ಯಾನೇಜರ್ ಲೋಹಿತ್ ಕುಮಾರ್, ಉಪ ವ್ಯವಸ್ಥಾಪಕ ದಿನೇಶ್, ಅಮರ್ ಡ್ರಗ್ ಸಂಸ್ಥೆಯ ಮಾಲಕ ಗಣಪತಿ ಭಟ್ ಹಾಗೂ ಮುಳಿಯ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.











