ಕಳೆಂಜ: ಪರಪ್ಪು – ಕುಕ್ಕಾಜೆ ರಸ್ತೆ ಮಧ್ಯ ಭಾಗವಾದ ಪರಪ್ಪು ಎಂಬಲ್ಲಿ ಕಿರು ಹೊಳೆ ಇದ್ದು , ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹೊಳೆಯ ಕೆಲ ಭಾಗ ಸಂಪೂರ್ಣ ಕೊಚ್ಚಿಕೊಂಡು ಹೋಗಿ, ವಾಹನಗಳು ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಸಂದರ್ಭದಲ್ಲಿ ಅ ಭಾಗದ ಜನರ ಒತ್ತಾಯದ ಮೇರೆಗೆ ಶಿಶಿಲ- ಅರಸಿನಮಕ್ಕಿ,ಶೌರ್ಯ, ವಿಪತ್ತು ನಿರ್ವಾಹಣ ಘಟಕದ ಸದಸ್ಯರಾದ ಹರೀಶ್ ಕುಮಾರ್ ವಳಗುಡ್ಡೆ, ಧನಂಜಯ ಗೌಡ ವಲಚ್ಚಿಲು ಇವರ ನೇತೃತ್ವದಲ್ಲಿ, ಊರವರಾದ ಕೇಶವ ಗೌಡ ವಳಗುಡ್ಡೆ, ಗುಣವರ್ಮ ಜೈನ್, ಗುರುವಪ್ಪ ನಾಯ್ಕ, ಧರ್ನಪ್ಪ ಗೌಡ ವಳಂಬಲ, ಸಹಕಾರದೊಂದಿಗೆ ರಸ್ತೆಯನ್ನ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ.











