ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ನಿವಾಸಿ ಹಿರಿಯ ವಕೀಲರಾದ ಶ್ರೀಧರ ಗೌಡ(63ವ) ರವರು ಅನಾರೋಗ್ಯದಿಂದ ಇಂದು (ಆ.23ರಂದು) ನಿಧನರಾದರು.
ಇವರು ಬೆಳ್ತಂಗಡಿಯ ವಕೀಲ ಈಶ್ವರ ಭಟ್ ಹಾಗೂ ಪುತ್ತೂರಿನ ಹಿರಿಯ ವಕೀಲರಾಗಿದ್ದ ಶಿವರಾಮ್ ಗೌಡ ರ ಬಳಿ ಜೂನಿಯರ್ ವಕೀಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು, ವಕೀಲರಾಗಿ 36 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ.
ಮೃತರು ಪತ್ನಿ ವಿದ್ಯಾ ಹಾಗೂ ಮಗಳಾದ ವೈಷ್ಣವಿ ಹಾಗೂ ಬಂಧುವರ್ಗದವರನ್ನು ಅಗಲಿರುತ್ತಾರೆ. ಇವರ ನಿಧನಕ್ಕೆ ಬೆಳ್ತಂಗಡಿ ವಕೀಲರ ಸಂಘ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.











