
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್ ಅವರು ಶ್ರೀ ಗಣೇಶೋತ್ಸವಕ್ಕೆ ಆಮಂತ್ರಿಸಿದರು.

ಈ ಸಂದರ್ಭದಲ್ಲಿ ಸಮಿತಿ ಪ್ರಮುಖರಾದ ರಾಜ್ ಶೇಖರ್ ಅಜ್ರಿ,ಗಂಗಾಧರ ಮಿತ್ತಮಾರ್,ಯೋಗೀಶ್ ಕುಮಾರ್ ನಡಕ್ಕರ,ಅಭಿನಂದನ್ ಹರೀಶ್ ಕುಮಾರ್,ಅರೆಕ್ಕಲ್ ರಾಮಚ್ಚಂದ್ರ ಭಟ್,ಜಗದೀಶ್ ಹೆಗ್ಡೆ ನಾವರ,ಕೇಶವ ಬೆಳಾಲು,ಪ್ರಜ್ವಲ್ ಜೈನ್,ಸುಭಾಶ್ಚಂದ್ರ ರೈ ಅಳದಂಗಡಿ ಉಪಸ್ಥಿತರಿದ್ದರು.











