ತೆಕ್ಕಾರು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಶಿಕ್ಷಕ ನಿಂಗಪ್ಪ ಎನ್ ಇವರು ಆ. 30 ರಂದು ಸೇವಾ ನಿವೃತ್ತಿ ಹೊಂದಿರುತ್ತಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ ಮಂಜುನಾಥ, ಪದಾಧಿಕಾರಿಗಳಾದ ಚಿದಾನಂದ ಬೆಳಾಲು, ರಮೇಶ್ ಮಾಳಗೊಂಡ, ಶಿವನಿಂಗಪ್ಪ ಮರೋಡಿ, ಸಣ್ಣಪ್ಪ ಉರುವಾಲು, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಕನಕಾಂಬ, ಶ್ರೀಮತಿ ಲಲಿತಾ ನಿವೃತ್ತ ಶಿಕ್ಷಕಿ, ಶಾಲಾ ಸಂಚಾಲಕರಾದ ಗಿರಿಧರ ನಾಯಕ್, ಪುತ್ತಿಲ ಕ್ಲಸ್ಟರಿನ CRP ಶ್ರೀ ಎಂ ಷರೀಫ್ ಹಾಜರಿದ್ದು ನಿವೃತ್ತ ಶಿಕ್ಷಕ ನಿಂಗಪ್ಪ ದಂಪತಿಗಳಿಗೆ ಅಭಿನಂದಿಸಿ, ಗೌರವಿಸಲಾಯಿತು.











