September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಈದ್ ಮಿಲಾದ್ ಪ್ರಯುಕ್ತ ಖಿಲರ್ ಜುಮ್ಮಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ

ಬೆಳ್ತಂಗಡಿ : ಖಿಲರ್ ಜುಮ್ಮಾ ಮಸೀದಿ ಮತ್ತು ಖಿಲರಿಯಾ ಸ್ವಲಾತ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ 3 ದಿನಗಳ ಧಾರ್ಮಿಕ ಕಾರ್ಯಕ್ರಮ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಜಮಾತ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸೆ. 3 ರಾತ್ರಿ ನಡೆದ ಮದರಸ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ತ್ವಾಹ ಜಿಫ್ರಿ ತಂಗಳ್ ಅವರ ದುವಾಶೀರ್ವಾದದೊಂದಿಗೆ ಮಸೀದಿ ಖತೀಬಾರದ ಹನೀಫ್ ಫೈಝಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮದರಸ ಪ್ರಾಧ್ಯಾಪಕರು, ಜಮಾತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೆ.4 ರಾತ್ರಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600 ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಮದರಸ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಅತಿಥಿಯಾಗಿ ಆಗಮಿಸಿದ್ದ ಡ್ರಿಮ್ ಡೀಲ್ ಮಾಲೀಕರಾದ ಜ| ಮಹಮ್ಮದ್ ಸುಹೈಲ್ ಅವರನ್ನು ಸನ್ಮಾನಿಸಲಾಯಿತು.

ಖಿಲರ್ ಜುಮ್ಮಾ ಮಸೀದಿ ಸೇವೆ ನೀಡುತ್ತಿರುವ ಉಸ್ತಾದರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸೆ. 5 ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ವಲಾತ್ ಕಮಿಟಿ ಅಧ್ಯಕ್ಷ ಹೈದರ್ ಬಿ.ಕೆ ನೆರವೇರಿಸಿದರು. ಗುರುವಾಯನಕೆರೆ ದರ್ಗಾ ಝೀಯಾರತ್ ನಂತರ ಮಸೀದಿಯಲ್ಲಿ ಮೌಲಿದ್ ಪಾರಾಯಣ ನಡೆಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿ ಇದರ ಪದಾಧಿಕಾರಿಗಳು, ಖಿಲರಿಯಾ ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಮಸೀದಿ ಉಸ್ತಾದರು, ಜಮಾತ್ ಬಾಂಧವರು, ಮಕ್ಕಳು, ಪೋಷಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ನಝೀರ್ ಬಿ ಎ, ಮಹಮ್ಮದ್ ಕೊಡಿ ಸಭೆ, ಬಿ. ಶೇಕುಂಞ್ಞ, ಶರೀಫ್ ಮಟ್ಲ, ರಝಕ್ ಕೊಡಿಸಭೆ, ಹೈದರ್ ಬಿ.ಕೆ, ಫೈಝಲ್ ಐ ಜೆ, ಇಸ್ಮಾಲಿ ಐ ಬಿ, ಹಾರಿಸ್ ಐ ಜೆ, ಅಬುಸಾಲಿ, ಎನ್ ಎಸ್ ಅಬ್ದುಲ್ ರಹಿಮಾನ್, ಖಾದರ್ ಕುದ್ರಡ್ಕ, ಮೊಯಿದಿನ್ ಬಿ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಗೇರುಕಟ್ಟೆ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಂಭ್ರಮ ಸ್ವಾತಂತ್ರ್ಯ ಆಚರಣೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ: 13ನೇ ಗುರುತಿನ ಸ್ಥಳದಲ್ಲಿ ಜಿಪಿಆರ್ ಯಂತ್ರ ಬಳಸಿ ಪರಿಶೀಲನೆಗೆ ಮುಂದಾದ ಎಸ್.ಐ.ಟಿ

Suddi Udaya

ಸರಕಾರಿ ನೌಕರರ ಕ್ರೀಡಾಕೂಟ: ಯೋಗಾಸನ ಸ್ಪರ್ಧೆಯಲ್ಲಿ ರೆಖ್ಯದ ಬಾಲಕೃಷ್ಣರವರಿಗೆ ಚಿನ್ನದ ಪದಕ

Suddi Udaya

ಧಮ೯ಸ್ಥಳ: 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ

Suddi Udaya

ನ.27-30 :ಎಕ್ಸೆಲ್ ಕಾಲೇಜಿನಲ್ಲಿ ಅಕ್ಷರೋತ್ಸವ ಮತ್ತು ಎಕ್ಸೆಲ್ ಪರ್ಬ ವಿಶೇಷ ಕಾರ್ಯಕ್ರಮ ನಟ ರಮೇಶ್ ಅರವಿಂದ್,ಯೋಗರಾಜ್ ಭಟ್ ಸೇರಿದಂತೆ ಸ್ವಾಮೀಜಿಯವರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಂದ ಮಾಹಿತಿ

Suddi Udaya

ಕರಾಟೆ ಚಾಂಪಿಯನ್ಶಿಪ್: ಬೆಳ್ತಂಗಡಿಯ ಸೈಂಟ್ ಮೇರಿಸ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ನಾಫೀರವರು ಕುಮಿಟೆಯಲ್ಲಿ ಹಾಗೂ ಕಟಾದಲ್ಲಿ ಕಂಚಿನ ಪದಕ

Suddi Udaya
error: Content is protected !!