ಉಜಿರೆ: ಪೋಷಣಾ ಮಾಸಾಚರಣೆಯ ಅಂಗವಾಗಿ, ಎಸ್ಡಿಎಂ ಕಾಲೇಜಿನ ಡಯಟ್ ಮತ್ತು ನ್ಯೂಟ್ರಿಷನ್ ವಿಭಾಗವು ಉಜಿರೆಯ ಎಸ್ಡಿಎಂ ಡಿ-ಅಡಿಕ್ಷನ್ ಸೆಂಟರ್ನ ಪ್ರತಿನಿಧಿಗಳಿಗಾಗಿ ಸೆ.6ರಂದು ಪೋಷಣಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.
ಈ ಕಾರ್ಯಕ್ರಮವನ್ನು ಎಸ್ಡಿಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಮೂಲ ವೈದ್ಯಕೀಯ ವಿಜ್ಞಾನ ವಿಭಾಗದ ಡೀನ್ರಾದ ಡಾ. ಬಾಲಕೃಷ್ಣ ಶೆಟ್ಟಿ ಅವರು ಯೋಜನಾಧಿಕಾರಿಗಳಾದ ಮಾಧವ್ ಗೌಡ ಅವರ ಸಾನ್ನಿಧ್ಯದಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಅಭಯ್ ಸಾಯಿ, ಪಿ.ಜಿ. ವಿದ್ಯಾರ್ಥಿ, ಅವರು ವ್ಯಸನಮುಕ್ತ ಜೀವನದಲ್ಲಿ ಸಮತೋಲಿತ ಆಹಾರದ ಮಹತ್ವ, ಪೌಷ್ಠಿಕಾಂಶಗಳ ಅಗತ್ಯತೆ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಉಪನ್ಯಾಸ ನೀಡಿದರು. ಡಿ-ಅಡಿಕ್ಷನ್ ಕೇಂದ್ರದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಜ್ಞಾನವನ್ನು ಪಡೆದುಕೊಂಡರು.











