July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಬೆಳ್ತಂಗಡಿ : ರಸ್ತೆಯಲ್ಲಿ ಧೂಳೋ ಧೂಳ್ ಪ್ರಯಾಣಿಕರಿಗೆ ಸಂಕಟ

ಬೆಳ್ತಂಗಡಿ: ಕಳೆದ ಕೆಲ ದಿನಗಳಿನಿಂದ ಬೆಳ್ತಂಗಡಿ ಪಟ್ಟಣದ ರಸ್ತೆಯಲ್ಲಿ ಧೂಳಿನ ಸಾಮ್ರಾಜ್ಯವೇ ತೆರೆದುಕೊಂಡಿದೆ. ಮಳೆಗಾಲದಲ್ಲಿ ಹೊಂಡಗಳನ್ನು ಮುಚ್ಚಲು ಹಾಕಿದ್ದ ಜಲ್ಲಿ ಹುಡಿ ಇಂದು ಸವಾರಿಗೆ ಧೂಳಿನ ಮಜ್ಜನ ಮಾಡುತ್ತಿದೆ.

ಸಣ್ಣ ವಾಹನ ಚಲಿಸಿದರೂ ಮೇಲೇಳುವ ಧೂಳಿನಿಂದ ಜನರು ರೋಸಿ ಹೋಗಿದ್ದಾರೆ. ತಾಲೂಕು ಕೇಂದ್ರವನ್ನು ಸಂಪರ್ಕಿಸುವ ಗುರುವಾಯನಕೆರೆ, ಸಂತೆಕಟ್ಟೆ, ಬೆಳ್ತಂಗಡಿ, ಲಾಯಿಲ, ಉಜಿರೆ ಸೇರಿದ್ದಂತೆ ನಾನಾ ರಸ್ತೆಗಳು ಧೂಳುಮಯಗೊಂಡಿದೆ.

ಒಂದೇಡೆ ಮಂಗಳೂರು-ವಿಲ್ಲಂಪುರಂ ರಾ.ಹೆ.ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಬಾರಿಯ ವೀಪರಿತ ಮಳೆಯಿಂದ ರಸ್ತೆಗಳಲ್ಲಿ ಹೊಂಡ ಸೃಷ್ಟಿಯಾಗಿತ್ತು. ಇದನ್ನು ಮುಚ್ಚುವ ಸಾಲುವಾಗಿ ತಾತ್ಕಲಿಕವಾಗಿ ಜಲ್ಲು ಹುಡಿಗಳನ್ನು ಹಾಕಿ ಗುಂಡಿ ಮುಚ್ಚುವ ಕಾರ್ಯ ನಡೆದಿತ್ತು. ಆದರೆ ಇದೀಗ ಕೆಲ ದಿನಗಳಿಂದ ಬಿಸಿಲಿನ ವಾತವರಣವಿದ್ದು ರಸ್ತೆಗಳಲ್ಲಿ ವಾಹನ ವೇಗವಾಗಿ ಸಂಚರಿಸುತ್ತಿದ್ದಂತೆಯೇ ಧೂಳು ಮೇಲೇಳುತ್ತಿದೆ. ಇದರಿಂದಾಗಿ ವಾಹನ ಸವಾರರಷ್ಟೆ? ಅಲ್ಲ ರಸ್ತೆಯ ಇಕ್ಕೆಲಗಳ ವರ್ತಕರು, ನಿವಾಸಿಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಮಸ್ಯೆ:
ರಸ್ತೆ ಬದಿಯ ವಾಣಿಜ್ಯ ಮಳಿಗೆಗಳ ವರ್ತಕರು ಧೂಳಿನಿಂದಾಗಿ ವಹಿವಾಟಿನಲ್ಲಿ ತೊಂದರೆಗೆ ಸಿಲುಕಿದ್ದರೆ, ರಸ್ತೆ ಬದಿಯ ಮನೆಯಲ್ಲಿ ವಾಸವಾಗಿರುವವರು ಧೂಳಿನಿಂದಾಗಿ ಬೇಸತ್ತು ದಿನವಿಡೀ ಮನೆಗಳ ಬಾಗಿಲು ಮುಚ್ಚಿಕೂಡುವಂತಾಗಿತ್ತು. ಅಷ್ಟೆ? ಅಲ್ಲ ರಸ್ತೆಯಲ್ಲಿ ಸಂಚರಿಸುವವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಮಾಸ್ಕ್ ಧರಿಸಿ ಹೋಗುವಂಥ ಸ್ಥಿತಿಯಿತ್ತು. ಅನೇಕರು ಧೂಳಿನಿಂದಾಗಿ ಆರೋಗ್ಯ ಹದಗೆಡುತ್ತಿದೆ ಎಂದಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಗೆ ನೀರು ಹಾಕು ಕಾರ್ಯ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಮನೀಷ್ ವಿ. ಅಂಚನ್ ಪಾಲೇದು

Related posts

ದ..ಕ. ಜಿಲ್ಲಾ ಕ.ಸಾ.ಪ. ವತಿಯಿಂದ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಅರಸ್ ಜನ್ಮದಿನಾಚರಣೆ

Suddi Udaya

ಬಜಿರೆಯಲ್ಲಿ ಎರಡು ಕುಟುಂಬಗಳ ನಡುವೆ ಜಾಗದ ಪಾಲಿನ ವಿಷಯದಲ್ಲಿ ಹೊಡೆದಾಟ: ಪರಸ್ಪರ ಆರೋಪಿಸಿ ಪೊಲೀಸರಿಗೆ ದೂರು

Suddi Udaya

ಉಜಿರೆ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಆಚರಣೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಮತ್ತು ಗ್ರಾಮೀಣ ಘಟಕದ ಪದಾಧಿಕಾರಿಗಳ ಸಭೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಉಜಿರೆಯಲ್ಲಿ ನೂತನ ರೂಪದಲ್ಲಿ ಶುಭಾರಂಭಗೊಂಡ ‘ಶ್ರೀರಾಮ್ ತರಕಾರಿ & ಫ್ರೂಟ್ಸ್’

Suddi Udaya
error: Content is protected !!