ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆಯು ಕ್ಷೇತ್ರದ ಅಧ್ಯಕ್ಷ ರಾಜು ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಸೆ.13 ರಂದು ನಡೆಯಿತು.
ಸಭೆಯಲ್ಲಿ ಕ್ಷೇತ್ರದ ನೂತನ ಅಧ್ಯಕ್ಷ ರಾಜು ಪೂಜಾರಿ, ಪ್ರಧಾನ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ, ಕೋಶಾಧಿಕಾರಿ ಶಶಿಕಲಾ ಮಡಂತ್ಯಾರು, ಜಿಲ್ಲಾ ಸದಸ್ಯರಾದ ಕುಶಾಲಪ್ಪಗೌಡ , ಶಾಂಭವಿ ಪಿ ಬಂಗೇರ, ನಾಗೇಶ್ ಕುಮಾರ್, ರವೀಂದ್ರ ಗೇರುಕಟ್ಟೆ ಕ್ಷೇತ್ರದ ಉಪಾಧ್ಯಕ್ಷ ವಸಂತ ಪೂಜಾರಿ ಹಾಗೂ ವಲಯದ ಅಧ್ಯಕ್ಷರು , ಕಾರ್ಯದರ್ಶಿ , ಕೋಶಾಧಿಕಾರಿ ಹಾಗೂ ಸದಸ್ಯರು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಕುಶಾಲಪ್ಪ ಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅದೇ ರೀತಿ ಲ್ಯಾನ್ಸಿ ಡಿಸೋಜಾ, ರಾಜು ಪೂಜಾರಿ, ಶಾಂಭವಿ ಪಿ. ಬಂಗೇರ ಬಂಗೇರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಹೊಸ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಯವರನ್ನು 9 ವಲಯಗಳ ಅಧ್ಯಕ್ಷರು ಮತ್ತು ಅಳದಂಗಡಿ ವಲಯದ ಸದಸ್ಯರು ಸೇರಿ ಗೌರವಿಸಿದರು.
ವತ್ಸಲ ಉಜಿರೆ ಪ್ರಾರ್ಥಿಸಿ, ಸದಾನಂದ ನಿರೂಪಿಸಿ, ಮೋಹನ್ ದಾಸ್ ಸ್ವಾಗತಿದರು. ವಸಂತ್ ಪೂಜಾರಿ ಧನ್ಯವಾದವಿತ್ತರು.











