ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆ

ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆಯು ಕ್ಷೇತ್ರದ ಅಧ್ಯಕ್ಷ ರಾಜು ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಸೆ.13 ರಂದು ನಡೆಯಿತು.

ಸಭೆಯಲ್ಲಿ ಕ್ಷೇತ್ರದ ನೂತನ ಅಧ್ಯಕ್ಷ ರಾಜು ಪೂಜಾರಿ, ಪ್ರಧಾನ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ, ಕೋಶಾಧಿಕಾರಿ ಶಶಿಕಲಾ ಮಡಂತ್ಯಾರು, ಜಿಲ್ಲಾ ಸದಸ್ಯರಾದ ಕುಶಾಲಪ್ಪಗೌಡ , ಶಾಂಭವಿ ಪಿ ಬಂಗೇರ, ನಾಗೇಶ್ ಕುಮಾರ್, ರವೀಂದ್ರ ಗೇರುಕಟ್ಟೆ ಕ್ಷೇತ್ರದ ಉಪಾಧ್ಯಕ್ಷ ವಸಂತ ಪೂಜಾರಿ ಹಾಗೂ ವಲಯದ ಅಧ್ಯಕ್ಷರು , ಕಾರ್ಯದರ್ಶಿ , ಕೋಶಾಧಿಕಾರಿ ಹಾಗೂ ಸದಸ್ಯರು ಭಾಗವಹಿಸಿದ್ದರು.


ಸಭೆಯನ್ನು ಉದ್ದೇಶಿಸಿ ಕುಶಾಲಪ್ಪ ಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅದೇ ರೀತಿ ಲ್ಯಾನ್ಸಿ ಡಿಸೋಜಾ, ರಾಜು ಪೂಜಾರಿ, ಶಾಂಭವಿ ಪಿ. ಬಂಗೇರ ಬಂಗೇರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಹೊಸ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಯವರನ್ನು 9 ವಲಯಗಳ ಅಧ್ಯಕ್ಷರು ಮತ್ತು ಅಳದಂಗಡಿ ವಲಯದ ಸದಸ್ಯರು ಸೇರಿ ಗೌರವಿಸಿದರು.

ವತ್ಸಲ ಉಜಿರೆ ಪ್ರಾರ್ಥಿಸಿ, ಸದಾನಂದ ನಿರೂಪಿಸಿ, ಮೋಹನ್ ದಾಸ್ ಸ್ವಾಗತಿದರು. ವಸಂತ್ ಪೂಜಾರಿ ಧನ್ಯವಾದವಿತ್ತರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ ರೂ.1 ಲಕ್ಷ ದೇಣಿಗೆ

Suddi Udaya

ಬೆಳ್ತಂಗಡಿ ಮಲೆಕುಡಿಯ ಸಮಾಜ ಬಾಂಧವರಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಉಜಿರೆ ರಾಮಚಂದ್ರ ಕಾಮತ್ ನಿಧನ

Suddi Udaya

ಧರ್ಮಸ್ಥಳ ಹಾಗೂ ಶಿಶಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಸೇವಾ ನಿವೃತ್ತಿ

Suddi Udaya

ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್’ ಕ್ರೀಡಾಕೂಟ: ಭಾರತ ತಂಡದ ಪ್ರಾಥಮಿಕ ತರಬೇತಿ ಶಿಬಿರಕ್ಕೆ ಎಸ್.ಡಿ.ಎಂ ಕಾಲೇಜಿನ ಚಿಂತನ್ ಬಿ ಸಿ, ಪುನೀತ್ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ವಾಟರ್ ಬೆಡ್ ವಿತರಣೆ

Suddi Udaya
error: Content is protected !!