September 6, 2026
ಶಿಕ್ಷಣ ಸಂಸ್ಥೆ

ಸುಲ್ಕೇರಿ ಅಂಗನವಾಡಿ ಕೇಂದ್ರದಲ್ಲಿ ಪೋಷನ್ ಮಾಸಾಚರಣೆ ಕಾರ್ಯಕ್ರಮ

ಸುಲ್ಕೇರಿ: ಅಂಗನವಾಡಿ ಕೇಂದ್ರದಲ್ಲಿ ಸೆ.17ರಂದು ಪೋಷನ್ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವ ಮಕ್ಕಳ ತಾಯಂದಿರು, ಶ್ರೀ ದೇವಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಸುತ್ತಮುತ್ತಲು ದೊರಕುವ ಸೊಪ್ಪು ತರಕಾರಿಗಳನ್ನು ಉಪಯೋಗಿಸಿ ವಿವಿಧ ರೀತಿಯ ಪೌಷ್ಟಿಕಾಂಶಯುಕ್ತ ಖಾದ್ಯಗಳನ್ನು ತಯಾರಿಸಿ ಇದರ ಮಹತ್ವವನ್ನು ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪೂಜಾರಿ ಮತ್ತು ಆರೋಗ್ಯದ ಬಗ್ಗೆ ಅಳದಂಗಡಿ ಆರೋಗ್ಯ ಕೇಂದ್ರದ ಸಿ.ಎಚ್.ಒ. ಲೀಲಾವತಿ ಅವರು ತಿಳಿಸಿದರು.

ಅದೇ ರೀತಿ ಪ್ರತಿದಿನ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡೇಡ್ ವಿಟಮಿನ್ ಇವೆಲ್ಲದರ ಪ್ರಮಾಣವನ್ನು ವಿವರಿಸಿದರು. ಇದರ ಜೊತೆಗೆ ಭಾರತ ಸರ್ಕಾರವು ಈ ದಿನ ಪ್ರಾರಂಭಿಸಿದ ಸ್ವಾಸ್ಥ್ಯ ನಾರಿ ಸಶಕ್ತ ಕುಟುಂಬ ಅಭಿಯಾನದ ಅಂಗವಾಗಿ ಬಂದ ತಾಯಂದಿರ ಹಾಗೂ ಊರಿನ ಸದಸ್ಯರ ಶುಗರ್ ಲೆವೆಲ್ ಮತ್ತು ಬಿಪಿ ಪರೀಕ್ಷೆ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಷಣ ಮಾಸಾಚರಣೆ ಅಧ್ಯಕ್ಷತೆಯನ್ನು ನಾರಾಯಣ ಪೂಜಾರಿ ವಹಿಸಿದ್ದರು ಮತ್ತು ಬಾಲವಿಕಾಸ ಸಮಿತಿಯ ಅಧ್ಯಕ್ಷರು ಸುಜಯ, ಆಶಾ ಕಾರ್ಯಕರ್ತೆಯ ಹೇಮಲತಾ, ಸಿ.ಎಚ್.ಒ ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ, ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕರು ಯಶೋಧರ ಪೂಜಾರಿ, ಸಂಜೀವಿನಿ ಮಹಿಳಾ ಸಂಘದ ಮೇಲ್ವಿಚಾರಕರು ವಿನುತ, ಮಹಮ್ಮಾಯಿ ದೇವಸ್ಥಾನದ ಮಾಜಿ ಅಧ್ಯಕ್ಷರು ವಸಂತ ಪೂಜಾರಿ, ಸಂಜೀವಿನಿ ಮಹಿಳಾ ಸಂಘದ ಮೇಲ್ವಿಚಾರಕರು ಮತ್ತು ಸದಸ್ಯರು, ಮಕ್ಕಳ ತಾಯಂದಿರು, ಉಪಸ್ಥಿತರಿದ್ದರು. ಸೀತಮ್ಮ ಟೀಚರ್ ಸ್ವಾಗತ ಮಾಡಿ ಶ್ವೇತ ಧನ್ಯವಾದ ಮಾಡಿದರು.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿ ಎಸ್.ಡಿ.ಎಂ. ಶಾಲಾ ವಿದ್ಯಾರ್ಥಿ ಅಭಿಷೇಕ್ ತಾಲೂಕಿಗೆ ಪ್ರಥಮ

Suddi Udaya

ಉಜಿರೆ ಎಸ್.ಡಿ.ಎಂಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ‘ಮೈ ನೆಕ್ಸ್ಟ್ ಸ್ಟೆಪ್’ ಕಾರ್ಯಕ್ರಮ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿಗಳು ಕವಾಲಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ಸಾಂಪ್ರದಾಯಿಕ ದಿನಾಚರಣೆ

Suddi Udaya

ಎಸ್‌ಡಿಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಜಾಗೃತಿ ಉಪನ್ಯಾಸ ಕಾರ್ಯಕ್ರಮ

Suddi Udaya

ವೇಣೂರು ಐಟಿಐಗೆ ಶೇ. 100 ಫಲಿತಾಂಶ

Suddi Udaya
error: Content is protected !!