March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ವಿಕಾಸ ವಿ.ಸ. ಸಂಘದ ಮಹಾಸಭೆ: ಶೇ.15 ಡಿವಿಡೆಂಡ್ ಘೋಷಣೆ , ರೂ. 262.73 ಕೋಟಿ ವ್ಯವಹಾರ

ಬೆಳ್ತಂಗಡಿ: ಭರವಸೆ ಮತ್ತು ನಂಬಿಕೆಯೊಂದಿಗೆ ವಿಕಾಸ ವಿ.ಸ. ಸಂಘವು ಪ್ರಾರಂಭವಾಗಿ 17 ವರ್ಷ ಪೂರೈಸಿ 18ನೇ ವರ್ಷದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ೨೬೨.೭೩ ಕೋಟಿ ರೂ. ವ್ಯವಹಾರ ನಡೆಸಿ ೩೨.೨೧ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಲೋಸಿಯಸ್ ಡಿಸೋಜ ಹೇಳಿದರು.

ಗುರುವಾಯನಕೆರೆ ವಿಕಾಸ ಸದನ ಸಭಾಭವನದಲ್ಲಿ ಸೆ.20 ರಂದು ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಘವು ೪೯.೬೮ ಕೋ.ರೂ. ಠೇವಣಿ ಹೊಂದಿದ್ದು, ೪೬.೨೩ ಕೋ.ರೂ. ಸಾಲ ವಿತರಿಸಲಾಗಿದೆ. ಕಳೆದ ಸಾಲಿನಿಂದ ಸಾಲ ವಸೂಲಿ ಸಹಿತ ಲಾಭದಲ್ಲಿ ಹೆಚ್ಚಳವಾಗಿದೆ. ಸಂಘವು ಬೆಳ್ತಂಗಡಿ ಪೇಟೆಯಲ್ಲಿ ಕಟ್ಟಡ ಖರೀದಿಗೆ ೧೦ ಕೋ.ರೂ. ವ್ಯಯಿಸಿದ್ದು, ಅದು ಪ್ರಸಕ್ತ ೨೨ ಕೋ.ರೂ. ಮಿಗಿಲಾಗಿ ಪೇಟೆಧಾರಣೆಯಿದೆ. ಸಂಘವು ವಿದೇಶದಲ್ಲಿ ಉದ್ಯೋಗ ನಡೆಸುವ ಮಂದಿಗೆ ಸಾಲದ ರೂಪದಲ್ಲಿ ನೆರವಾಗಿದೆ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಗೋಪಿನಾಥ್ ನಾಯಕ್, ಅಂತೋನಿ ಪಾಸ್, ರಾಘವ ಶೆಟ್ಟಿ ಕೆ., ಗ್ರೆಗೋರಿ ಡಿಮೆಲ್ಲೊ, ಪ್ರವೀಣ್ ಕುಮಾರ್ ಎಚ್.ಎಸ್., ಜಗದೀಶ್, ಶೇಖರ್ ನಾಯ್ಕ್, ದಿನೇಶ್ ನಾಯಕ್ ಬಿ., ಪ್ರವೀಣ್ ಚಂದ್ರ ಮೆಹಂದಳೆ, ಮಮತಾ ಎಂ.ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಯೋಗೀಶ್ ಪೈ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡಿಸ್ ವಂದಿಸಿದರು. ನಿರ್ದೇಶಕರಾದ ಒಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಕೇರಿಮಾರ್ ನಿವಾಸಿ ಶ್ರೀಮತಿ ಚೆಲುವಮ್ಮ ನಿಧನ

Suddi Udaya

ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ದಿ| ಪ್ರಮೋದ್ ಕುಮಾರ್ ರವರಿಗೆ ಬೆಳ್ತಂಗಡಿ ಸಿಎ ಬ್ಯಾಂಕ್ ನಿಂದ ಸಂತಾಪ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಕಸದಿಂದ ರಸ ಸ್ಪರ್ಧೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸುಜಿತಾ ವಿ. ಬಂಗೇರ ಮತ್ತು ಬಿನುತಾ ಬಂಗೇರ ಭೇಟಿ

Suddi Udaya

ಬಂದಾರು: ಮುರ್ತಾಜೆ ಎಂಬಲ್ಲಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಜ.7: ತಣ್ಣೀರುಪಂತ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!