38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ

ಮಿತ್ತಬಾಗಿಲು: ಶ್ರೀ ದುರ್ಗಾಪರಮೇಶ್ವರಿ/ ಶ್ರೀ ದುರ್ಗಾದೇವಿ ಯಕ್ಷಗಾನ ಮಂಡಳಿ ಕೊಲ್ಲಿ ಇವರಿಂದ ಕೊಲ್ಲಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕಿರಣ್ ಚಂದ್ರ ಡಿ. ಪುಷ್ಪಗಿರಿ , ವಾಸುದೇವರಾವ್ ಕಕ್ಕೆನೇಜಿ ಆಡಳಿತ ಮೊಕ್ತೇಸರರು ಸದಾಶಿವ ದೇವಸ್ಥಾನ, ಕೂಡಬೆಟ್ಟು , ಸತೀಶ್ ಕಾಮತ್ ಗೌರವಾಧ್ಯಕ್ಷ ಆಡಳಿತ ಸಮಿತಿ ಕೊಲ್ಲಿ, ದಾಸಪ್ಪ ಗೌಡ ಅಧ್ಯಕ್ಷ ಆಡಳಿತ ಸಮಿತಿ ಕೊಲ್ಲಿ, ರಂಜಿತ್ ಕುಮಾರ್ ಅರಣ್ಯಾಧಿಕಾರಿ, ಬೆಳ್ತಂಗಡಿ, ರವಿ ಸುವರ್ಣ ಅಧ್ಯಕ್ಷ ಯಕ್ಷಗಾನ ಮಂಡಳಿ ಕೊಲ್ಲಿ, ವಿನಯಚಂದ್ರ ಸೇನರಬೆಟ್ಟು ಅಧ್ಯಕ್ಷ ಗ್ರಾಮ ಪಂಚಾಯತ್ ಮಿತ್ತಬಾಗಿಲು, ಶ್ರೀಮತಿ ವಿಜಯಲಕ್ಷ್ಮೀ ಉಪಾಧ್ಯಕ್ಷೆ ಗ್ರಾಮ ಪಂಚಾಯತ್ ಮಿತ್ತಬಾಗಿಲು ಉಪಸ್ಥಿತರಿದ್ದರು.

ಸೋಮಪ್ಪ ಪೂಜಾರಿ ಬಂಡಾರಿಕೋಡಿ ಪ್ರಸ್ತಾವಿಕ ಮಾತನಾಡಿದರು. ಈ ವೇಳೆ ನಿವೃತ್ತ ಯೋಧ ಬಾಲಚಂದ್ರ ಗೌಡ ಪುತ್ತೂರು ಇವರನ್ನು ಗೌರವಿಸಲಾಯಿತು.

ಕೊರಗಪ್ಪ ಶೆಟ್ಟಿ ಅರ್ವ ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರು, ಚಂದ್ರಶೇಖರ್ ಯಕ್ಷಗಾನ ಕಲಾವಿದರು ಮುಂಡಾಜೆ, ದೇವರಾಜ್ ಅಮೈ ರಾಷ್ಟ್ರಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕರು , ಕೇಶವ ಬಿ. ಷಡರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕರು, ವಿಠಲ ನಿವೃತ್ತ ಪ್ರಭಾರ ಮುಖ್ಯಶಿಕ್ಷಕರು ಕಿಲ್ಲೂರು ಶಾಲೆ (ಪಡುಬಿದ್ರೆ) ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮೀನಾ ಮಾಲೂರು , ಕೋಶಾಧಿಕಾರಿ ಸತೀಶ್ ಪೂಜಾರಿ ಮಾಲೂರು, ಜತೆ ಕಾರ್ಯದರ್ಶಿ ಯಶೋಧ ಕಿಲ್ಲೂರು, ಕಾರ್ಯದರ್ಶಿ ಗೋಪಾಲ ಶಾಂತಿಗುಡ್ಡೆ, ಗೌರವ ಸಲಹೆಗಾರರಾದ ಧರ್ಣಪ್ಪ ಶೆಟ್ಟಿ, ಶ್ರೀಧರ ಪೂಜಾರಿ ಶಿರ್ಲಾಲು, ಸೋಮಪ್ಪ ಪೂಜಾರಿ ಬಂಡಾರಿಕೋಡಿ, ನಾರಾಯಣ ಗೌಡ ನೇತ್ರಕೊಡಂಗೆ, ಸೂರಪ್ಪ ಗೌಡ ನಡ್ತಿಕಲ್ಲು, ಸಂಪತ್ ಪೂಜಾರಿ ಕಜಕೆ, ಪೂಣಿಮಾ ಡಿ. ಶೆಟ್ಟಿ ಕೊಲ್ಲಿ, ಭಾಸ್ಕರ ಬಂಗಾಡಿ ಯಕ್ಷಗುರುಗಳು ಹಾಗೂ ಸಮಿತಿಯ ಸದಸ್ಯರು , ಊರವರು ಉಪಸ್ಥಿತರಿದ್ದರು.

ಜಯಂತ್ ಹೆಗ್ಡೆ, ವಿನಯ್ ನಡುಬೈಲು ಕಾರ್ಯಕ್ರಮ ನಿರೂಪಿಸಿದರು.

Related posts

ಗಾಯತ್ರಿ ಮಂತ್ರವೇ ಸರ್ವಶ್ರೇಷ್ಠ

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹದ ಪತ್ತೆ: ವಾರಸುದಾರರು ಧರ್ಮಸ್ಥಳ ಪೊಲೀಸ್ ಠಾಣೆ ಸಂಪರ್ಕಿಸಲು ಮನವಿ

Suddi Udaya

ಅಳದಂಗಡಿಯಲ್ಲಿ ತೃಷಾ ಮೆಡಿಕಲ್ ಶುಭಾರಂಭ

Suddi Udaya

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಕಾರೊಂದು ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ: ಯುವಕನನ್ನು ಬಂಧಿಸಿದ ಪೋಲಿಸರು

Suddi Udaya

ಶಿರ್ತಾಡಿ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನ ಉತ್ಸವ ಸಮಿತಿ, ಸ್ವಾಗತ ಸಮಿತಿಗೆ ಆಯ್ಕೆ

Suddi Udaya
error: Content is protected !!