ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಪಡಂಗಡಿ ಗ್ರಾಮ ಮತ್ತು ಅಂಚೆ ಸಹಯೋಗದೊಂದಿಗೆ ಕೃಷಿ ಮಾಹಿತಿ ಶಿಬಿರ ಅ.8ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಸರಿಯಾಗಿ ಸಂಘದ ಸಮೃದ್ಧಿ ಸಭಾಭವನದಲ್ಲಿ ನಡೆಯಲಿದೆ.
ಅಡಿಕೆ, ತೆಂಗು ಸಮಗ್ರ ನಿರ್ವಹಣೆ , ಬೋರ್ಡೊ ದ್ರಾವಣ ಗುಣಮಟ್ಟ ಪರೀಕ್ಷೆ , ಸುಳಿ ಕೊಳೆ ರೋಗದ ಬಗ್ಗೆ ಸಂಪನ್ಮೂಲ ವ್ಯಕ್ತಿ ಪ್ರಭಾಕರ ಮಯ್ಯ ಸುರ್ಯ ಅವರು ಸಮಗ್ರ ಮಾಹಿತಿಯನ್ನು ನೀಡಲಿರುವರು.
ರೈತ ಸದಸ್ಯರು ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು.











