ಧರ್ಮಸ್ಥಳ : ಒಂಭತ್ತು ಮಾಗಣೆ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮದರ್ಶಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಸಂದರ್ಶಿಸಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ನಡೆಸುವ ಸದುದ್ದೇಶದ ಬಗ್ಗೆ ಆರ್ಥಿಕ ಸಹಕಾರ ನೀಡಲು ಮನವಿಯನ್ನು ಸಲ್ಲಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಕೆ. ಸುಬ್ರಾಯ ಆಚಾರ್ಯ, ಕಾರ್ಯಾಧ್ಯಕ್ಷ ಸುಧೀರ್ ಎಸ್., ಗೌರವ ಅಧ್ಯಕ್ಷ ಜಿ. ಟಿ. ಆಚಾರ್ಯ, ಉಪಾಧ್ಯಕ್ಷ ಪ್ರಶಾಂತ ಆಚಾರ್ಯ , ಮಂಗಳೂರು ದೇವಳದ ಮೊಕ್ತೇಸರರಾದ ಮಾನಂಪಾಡಿ ಜಗದೀಶ್ ಆಚಾರ್ಯ, ಪಂಜಿನಡ್ಕ ಜಗದೀಶ್ ಆಚಾರ್ಯ, ಕಿಲ್ಪಾಡಿ ಸದಾಶಿವ ಆಚಾರ್ಯ, ಜಗದೀಶ್ ಆಚಾರ್ಯ, SKGI ಕೊಪರೆಟಿವ್ ಸೊಸೈಟಿಯ ನಿರ್ದೇಶಕರಾದ ಮಂಜುನಾಥ ಆಚಾರ್ಯ ಅಳದಂಗಡಿ, ಇಂಜಿನಿಯರ್ ಯು. ಸುಂದರ್ ರಾಮ್ ಮಂಗಳೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











