ಬೆಳ್ತಂಗಡಿ: ಬೆಳಕಿನ ಹಬ್ಬ ದೀಪಾವಳಿ ಶುಭ ಸಂದರ್ಭದಲ್ಲಿ ಸುದ್ದಿ ಉದಯ ವಾರ ಪತ್ರಿಕೆ ಪ್ರತಿ ವರ್ಷದಂತೆ ಈ ವರ್ಷವೂ ಹೊರ ತಂದ ‘ಬೆಳಕಿನ ಉದಯ’ ವಿಶೇಷ ಸಾಹಿತ್ಯ ಪುಟಗಳನ್ನು ಒಳಗೊಂಡ ವರ್ಣರಂಜಿತ ವಿಶೇಷ ಸಂಚಿಕೆ-೨೦೨೫ನ್ನು ಅ.೧೫ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಯು. ಶರತ್ಕೃಷ್ಣ ಪಡ್ವೆಟ್ನಾಯ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಸುದ್ದಿಉದಯ ವಾರಪತ್ರಿಕೆ ಅಲ್ಪಕಾಲದಲ್ಲಿ ಜನಮನಗಳಿಸಿ ತಾಲೂಕಿನ ಹೆಮ್ಮೆಯ ಪತ್ರಿಕೆಯಾಗಿ ಮೂಡಿ ಬರುತ್ತಿದೆ. ಪತ್ರಿಕೆ ಉತ್ತಮವಾಗಿ ವಿಶಿಷ್ಟ ಗುಣಮಟ್ಟದ ಪ್ರಕಟಗೊಳ್ಳುತ್ತಿದ್ದು, ತಾಲೂಕಿನ ಮೂಲೆ, ಮೂಲೆಗೂ, ತಲುಪಿ ಮನೆ ಮಾತಾಗಿರುವುದು ಅಭಿನಂದನೀಯ ಪ್ರತೀ ವರ್ಷವೂ ದೀಪಾವಳಿ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರ ತಂದಿರುವುದು ಸಂತೋಷವಾಗಿದೆ. ಸಂಚಿಕೆಯಲ್ಲಿ ಉತ್ತಮ ವಿಚಾರಗಳಿದ್ದು, ತಾಲೂಕಿನ ಓದುಗರಿಗೆ , ಬರಹ ಗಾರರಿಗೆಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿರುವುದು ಒಳ್ಳೆಯ ವಿಚಾರ ಎಂದು ಹೇಳಿ, ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ತುಕಾರಾಮ್ ಬಿ., ಸಂಪಾದಕರಾದ ಬಿ.ಎಸ್.ಕುಲಾಲ್, ಉಪಸಂಪಾದಕ ಸಂತೋಷ್ ಪಿ.ಕೋಟ್ಯಾನ್, ವ್ಯವಸ್ಥಾಪಕ ತಿಮ್ಮಪ್ಪ ಗೌಡ ನಿಡ್ಲೆ , ವರದಿಗಾರ ಮನೀಶ್ ವಿ.ಅಂಚನ್, ರವೀಂದ್ರ ಶೆಟ್ಟಿ ಬಳಂಜಉಪಸ್ಥಿತರಿದ್ದರು.











