24 C
ಪುತ್ತೂರು, ಬೆಳ್ತಂಗಡಿ
July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಪಠ್ಯಕ್ರಮ ಉಜಿರೆಯಲ್ಲಿ ಅ.18 ರಂದು ದೀಪಾವಳಿ ಹಬ್ಬ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮೀ ನಾಯಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದೀಪಾವಳಿಯ ಹಿನ್ನೆಲೆಯನ್ನು ವಿವರಿಸಿದರು.

ಶತಮಾನಗಳಿಂದ ಆಚರಿಸಲಾಗುತ್ತಿರುವ ಈ ಹಬ್ಬ ಜೀವನದಲ್ಲಿ ಹೊಸತನ, ಚೈತನ್ಯ ಮತ್ತು ನೆಮ್ಮದಿಯ ಬೆಳಕನ್ನು ತುಂಬುತ್ತದೆ ಎಂದರು.

ಕಾರ್ಯಕ್ರಮದ ಅತಿಥಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕರು ಕಿರಿಯಾಡಿ ಶ್ರೀಮತಿ ರಾಜೇಶ್ವರಿ ಮಾತನಾಡಿ, ದೀಪಾವಳಿ ಹಬ್ಬವು ಕೇವಲ ಭಾರತದಲ್ಲೇ ಅಲ್ಲ, ವಿಶ್ವದಾದ್ಯಂತ ಸಂತೋಷದಿಂದ ಆಚರಿಸಲಾಗುತ್ತಿರುವ ಹಬ್ಬ. ದೀಪಾವಳಿಯ ಆಚರಣೆಯು ಕೇವಲ ಹಬ್ಬವಲ್ಲ, ನಮ್ಮ ಸಂಸ್ಕೃತಿ ಸಂಸ್ಕಾರ. ನಮ್ಮ ಆಚರಣೆಗಳ ಹಿನ್ನಲೆ ತಿಳಿದುಕೊಂಡು ಆಚರಣೆಗಳನ್ನು ಮುಂದುವರೆಸುತ್ತಾ ಬರುವುದು ನಮ್ಮ ಕರ್ತವ್ಯ ಎಂದರು.

ದೀಪಾವಳಿ ಹಬ್ಬ ಜೀವನದಲ್ಲಿ ಬೆಳಕು, ಸತ್ಯ ಮತ್ತು ಧನಾತ್ಮಕ ಚಿಂತನೆಯ ಸಂದೇಶವನ್ನು ಸಾರುತ್ತದೆ ಎಂದರು.
ವಿದ್ಯಾರ್ಥಿ ತೌಫೀರಾ ಸ್ವಾಗತಿಸಿ, ತಸ್ಮಯಿ ಅತಿಥಿ ಪರಿಚಯಿಸಿದರು.ಫಾಯೀಝಾ ವಂದಿಸಿದರು. ಸಚಿತ್ ಭಟ್ ನಿರೂಪಿಸಿದರು.

ವಿದ್ಯಾರ್ಥಿಗಳು ಕುಣಿತ ಭಜನೆ, ಸಾಂಸ್ಕೃತಿಕ ನೃತ್ಯ, ದೀಪಾವಳಿ ದಿನಗಳ ವಿಶೇಷತೆಯ ವಾಚನ ಮಾಡಲಾಯಿತು. ಮಕ್ಕಳೇ ರಚಿಸಿದ ಗೂಡುದೀಪಗಳ ಅಲಂಕಾರ, ತಳಿರುತೋರಣ ದೀಪಾವಳಿ ಆಚರಣೆಗೆ ವಿಶೇಷ ಮೆರುಗು ತಂದಿತು.ವಿದ್ಯಾರ್ಥಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ನಾರಾವಿ ಆದಿತ್ಯ ಫ್ಯಾಶನ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಈ ಆಫರ್ ಆಗಷ್ಟ್ 10 ರಿಂದ 20 ರವರೆಗೆ ಮಾತ್ರ

Suddi Udaya

ಎಸ್‌ಡಿಎಂ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಟಿ. ಪ್ರಕಾಶ ಪ್ರಭು ರವರಿಗೆ ಡಾಕ್ಟರೇಟ್ ಪದವಿ

Suddi Udaya

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿ ಎಸ್‌.ಡಿ.ಎಂ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!