ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಘಟಕದ ಮಾಸಿಕ ಸಭೆ ಮತ್ತು ಬೆಳ್ತಂಗಡಿ ಕೆಲ್ಲಗುತ್ತು ಶ್ರೀಮತಿ ರಾಧಾ ಇವರ ಮನೆಯ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿಕೊಡಲಾಯಿತು.


ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯದ ಮೇಲ್ವಿಚಾರಕರಾದ ಜಿ ರವಿ,ಬೆಳ್ತಂಗಡಿ ಏ ಒಕ್ಕೂಟದ ಅಧ್ಯಕ್ಷರಾದ ಮಹೇಶ್ ಕುಮಾರ್ , ಬೆಳ್ತಂಗಡಿ ಏ ಒಕ್ಕೂಟದ ಸೇವಾ ಪ್ರತಿನಿಧಿ ಕೇಶವ ಮತ್ತು ಬೆಳ್ತಂಗಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು ವಲಯದ ಮೇಲ್ವಿಚಾರಕರಾದ ಜಿ ರವಿ ಇವರು ಸ್ವಾಗತಿಸಿ ಬೆಳ್ತಂಗಡಿ A ಒಕ್ಕೂಟದ ಸೇವಾ ಪ್ರತಿನಿಧಿ ಕೇಶವ ಧನ್ಯವಾದ ವಿತ್ತರು















