ನಾಲ್ಕೂರು: ಹೃದಯಾಘಾತದಿಂದ ಯುವಕನೊರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಇಂದು ನಡೆದಿದೆ.
ಕುಡುಬಾಂಜೆ ನಿವಾಸಿ ಮೆಲ್ವೀನ್ (35 ವ) ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದ ಯುವಕ. ಸಾಧು ಮತ್ತು ಮೃದು ಸ್ವಭಾವದ ವ್ಯಕ್ತಿತ್ವ ಇವರದು.
ಮೃತರು ತಾಯಿ, ನಾಲ್ಕು ಮಂದಿ ಸಹೋದರರು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.











