ಬೆಳ್ತಂಗಡಿ ರೋಟರಿ ಕ್ಲಬ್ ನಡೆಸಿದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಉಜಿರೆಯ ಶ್ರೀ ಧ.ಮ ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ನಡೆಯಿತು.

ರೋಟರೀ ಕ್ಲಬ್ ನ ಅಧ್ಯಕ್ಷ ರೊ. ಪ್ರೊ ಪ್ರಕಾಶ ಪ್ರಭು ಸ್ವಾಗತಿಸಿದರು. ವಲಯ ನಾಲ್ಕು (ಬಿ) ಅಸಿಸ್ಟೆಂಟ್ ಗವರ್ನರ್ ರೋ. ಡಾ ಎ. ಜಯಕುಮಾರ್ ಶೆಟ್ಟಿಯವರು ಉದ್ಛಾಟನೆ ಮಾಡಿದರು. ವಲಯ ನಾಲ್ಕು (ಡಿ) ಅಸಿಸ್ಟೆಂಟ್ ಗವರ್ನರ್ ರೋ. ಡಾ. ರಾಜಾರಾಮರು ಇಂದಿನ ಎಲ್ಲಾ ವರ್ಗದ ಜನರು, ಈ ಶಟಲ್ ಬ್ಯಾಡ್ಮಿಂಟನ್ ಆಟ ಆರೋಗ್ಯವನ್ನು ಕಾಪಾಡಲು ಹೇಗೆ ಸಹಕಾರಿ ಎಂದು ವಿವರಿಸಿದರು.

ವೇದಿಕೆಯಲ್ಲಿ ಕ್ಲಬ್ ವಿಸ್ತರಣಾ ಅಧ್ಯಕ್ಷೆ ರೋ| ಶ್ರುತಿ ಮಾರ್ಥಾ , ಜಿಲ್ಲಾ ಬ್ಯಾಡ್ಮಿಂಟನ್ ಚೆಯರ್ ಮ್ಯಾನ್ ಹಾಗೂ ರೋಟರೀ ಕ್ಲಬ್ ಪುತ್ತೂರು ಸಿಟಿಯ ಮಾಜಿ ಅಧ್ಯಕ್ಷ ರೋ. ಪ್ರಶಾಂತ್ ಶೆಣೈ, ಬೆಳ್ತಂಗಡಿ ರೋಟರಿ ಕ್ಲಬ್ ನ ಕ್ರೀಡಾ ಚೇರ್ ಮ್ಯಾನ್ ರೋ. ಆದರ್ಶ ಕಾರಂತ ಉಪಸ್ಥಿತರಿದ್ದರು. ಕಾರ್ಯದರ್ಶಿ ರೊ. ಡಾ ಎಂ ಎಂ ದಯಾಕರ್ ವಂದಿಸಿದರು.
ಒಟ್ಟು 14 ರೋಟರಿ ಕ್ಲಬ್ ಗಳ ರೋಟೇರಿಯನ್ಸ, ಆ್ಯನ್ಸ, ಆ್ಯನೆಟ್ಸಗಳಿಗೆ, ಸಿಂಗಲ್ಸ, ಡಬಲ್ಸ ಮತ್ತು ಮಿಕ್ಸೆಡ್ ಡಬಲ್ಸ – ಹೀಗೆ ವಯಸ್ಸಿಗೆ ಅನುಗುಣವಾಗಿ ಒಟ್ಟು 17 ವಿವಿಧ ವರ್ಗಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.











