37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಗೇರುಕಟ್ಟೆ ಪತಂಜಲಿ ಯೋಗಶಾಖೆಯಲ್ಲಿ ತುಳಸಿ ಪೂಜೆ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಕ್ಷೀರ ಸಂಗಮ ಸಬಾಭವನ ಕಳಿಯ ಗೇರುಕಟ್ಟೆ ಯೋಗ ಶಾಖೆಯಲ್ಲಿ ತುಳಸಿ ಪೂಜೆಯನ್ನು ನೆರವೇರಿಸಲಾಯಿತು.

ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್, ಸಹ ಶಿಕ್ಷಕ ಸುಕೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿತ್ಯ ಯೋಗ ತರಗತಿಯನ್ನು ಸತೀಶ್ ನಾಳ ನಿರ್ವಹಿಸಿದರು. ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ತುಳಸಿ ವಿವಾಹ, ತುಳಸಿ ಪೂಜೆಯ ಮಹತ್ವ,ಲೌಕಿಕ ಮತ್ತು ಆಧ್ಯಾತ್ಮಿಕ, ಧಾರ್ಮಿಕ ವಿಧಿ ವಿಧಾನಗಳಲ್ಲಿ ತುಳಸಿಯ ಮಹತ್ವ ಮತ್ತು ತುಳಸಿಯಿಂದ ಸಿಗುವ ಪ್ರಯೋಜನಗಳ ಬಗ್ಗೆ ಭೌದ್ಧಿಕ ನೀಡಿದರು.

ಶಾಖೆಯ ಸಹಶಿಕ್ಷಕ ಸುಕೇಶ್, ವರದಿ ಪ್ರಮುಖ ಕೇಶವ, ಶಾಖೆಯ ಸಂಚಾಲಕ ವಿಜಯಣ್ಣ,ಸತೀಶ್, ಅಶೋಕ, ವಸಂತ ಉಪಸ್ಥಿತರಿದ್ದರು.
ಭಾರತಿ, ಪದ್ಮಲತಾ, ಅರುಣಕ್ಕ ತುಳಸಿ ಪೂಜೆಯನ್ನು ನೆರವೇರಿಸಿ ಪೂಜಾ ಪ್ರಸಾದ ವಿತರಿಸಲಾಯಿತು. ಶಾಖೆಯ ಯೋಗ ಬಂಧುಗಳ ಸಹಕಾರದಿಂದ ಅಮೃತ ಫಲಾಹಾರವನ್ನು ಜೋಡಿಸಲಾಗಿತ್ತು.

Related posts

ಬಳಂಜದಲ್ಲಿ ಟಿಪ್ಪರ್ ಪತ್ತೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಉಜಿರೆ: ರಮ್ಯಾ 1 ಗ್ರಾಮ್ ಗೋಲ್ಡ್ ಫ್ಯಾನ್ಸಿ& ಪೂಟ್ ವೇರ್ ನೂತನ ಶೋರೂಮ್ ಉದ್ಘಾಟನೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ

Suddi Udaya

ಪರಪ್ಪು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

Suddi Udaya

ಡಿ. 29 : ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಟ್ಟಡ ಅರಸಿನಮಕ್ಕಿಯಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ

Suddi Udaya

ಜೈನರಲ್ಲಿ ದೀಪಾವಳಿ ಮಹಾವೀರ ಶಕ

Suddi Udaya
error: Content is protected !!