ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕ್ಕಿರೆಸಾಲು ಎಂಬಲ್ಲಿ ಬುಧವಾರ ಚಿರತೆ ಕಂಡುಬಂದಿದೆ.
ಯೋಗೀಶ್ ಭಿಡೆ ಎಂಬವರು ಬೆಳಿಗ್ಗೆ 5ಗಂಟೆ ಸುಮಾರಿಗೆ ಉಜಿರೆ ಕಡೆ ಕಾರಿನಲ್ಲಿ ಹೋಗುವ ಸಮಯ ಭಾರಿ ಗಾತ್ರದ ಚಿರತೆ ರಸ್ತೆ ಮಧ್ಯೆ ಕಂಡು ಬಂದಿದೆ. ಸ್ವಲ್ಪ ಹೊತ್ತು ರಸ್ತೆಯಲ್ಲೇ ಇದ್ದ ಚಿರತೆ ಬಳಿಕ ಅರಣ್ಯದ ಕಡೆ ಹೋಗಿದೆ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.











