ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಅಥಿತಿ ಉಪನ್ಯಾಸಕಿ ಡಾ. ಸುಶ್ಮಿತಾ ಸಿ ಎಚ್ ಇವರು ಮಂಡಿಸಿದ “ಸೈಝೀಜಿಯಮ್ ಹಿಮಿಸ್ಫೆರಿಕಮ್ ಮತ್ತು ಸೈಝೀಜಿಯಮ್ ಕನರೆನ್ಸ್ ನ ಮಧುಮೇಹ ವಿರೋಧಿ ಸಾಮರ್ಥ್ಯ” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ ಎಚ್ ಡಿ ಪದವಿ ನೀಡಿದೆ.
ಇವರು ಬೆಳ್ತಂಗಡಿ ನಿವಾಸಿಯಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೃಷ್ಣಕುಮಾರ್. ಜಿ ಇವರು ಮಾರ್ಗದರ್ಶನ ಮಾಡಿರುತ್ತಾರೆ.











