July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ, ಉಜಿರೆ ಸಾನಿದ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ, ಉಜಿರೆಯ ಸಾನಿದ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ ದೀಪ ಬೆಳಗಿಸಿ ಮಾತನಾಡಿ ನೀತಿ ಕಥೆ ಹೇಳಿ ಮಕ್ಕಳನ್ನು ಸಂತೋಷ ಪಡಿಸಿದರು. ವೇದಿಕೆಯ ಮೇಲೆ ಲಯನ್ ಜಯಂತ ಶೆಟ್ಟಿ, ಲಯನ್ ರವೀಂದ್ರ ಶೆಟ್ಟಿ, ಲಯನ್ ರಾಜು ಶೆಟ್ಟಿ, ಲೆಯೋ ಅಧ್ಯಕ್ಷೆ ಲಿಯೋ ಭಾಷಿಣಿ, ಸಾನಿಧ್ಯ ತರಬೇತಿ ಕೇಂದ್ರದ ಮೇಲ್ವಿಚಾರಿಣಿ ಮಿಸ್ ಮಲ್ಲಿಕಾ ಮೇಡಂ ಹಾಗೂ ಪ್ರೇಮರಾಜ್ ರೋಷನ್ ಸಿಕ್ವೆರ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಭಿಲಾಶ್ ಮತ್ತು ಪ್ರೇಮರಾಜ ರೋಷನ್ ನಿರೂಪಿಸಿದರು. ಸಭೆಯಲ್ಲಿ ಲಯನ್ಸ್ ಸದಸ್ಯರಾದ ಲಯನ್ ಗೋಪಾಲಕೃಷ್ಣ ಕಾಂಚೋಡು, ಲಯನ್ ನಾಣ್ಯಪ್ಪ ನಾಯ್ಕ್, ಮತ್ತು ಲಯನ್ ಸುಂದರಿ ನಾಣ್ಯಪ್ಪ ಭಾಗವಹಿಸಿದ್ದರು. ವಂದನಾರ್ಪಣೆಯನ್ನು ಶಾಲೆಯ ವಿಶೇಷ ಅಧ್ಯಾಪಕಿಯಾದ ಮಿಸ್ ಅಕ್ಷತಾ ಕೆ ನಿರ್ವಹಿಸಿದರು.

Related posts

ಮತ್ಸ್ಯತೀರ್ಥ ಪ್ರಖ್ಯಾತ ಶಿಶಿಲ ದೇವಾಲಯದ ಮೀನುಗಳಿಗೆ ಭಕ್ತರು ಅರಳು ಹಾಕುವುದಕ್ಕೆ ನಿಷೇಧ- ದೇವಾಲಯದ ಆಡಳಿತ ನಿಧಾ೯ರ

Suddi Udaya

ಬಳಂಜ: ಬಂಟರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ದಿ. ಅನಿಲ್ ನಾಯ್ಗ ಟ್ರೋಫಿಯ ಕ್ರೀಡೋತ್ಸವ: ಸನ್ಮಾನ

Suddi Udaya

ಪತ್ರಕರ್ತ ಭುವನೇಶ್ ಗೇರುಕಟ್ಟೆಯವರಿಂದ ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ದೃಷ್ಟಿಯಿಂದ ಕೇಶದಾನ

Suddi Udaya

ಧರ್ಮಸ್ಥಳಕ್ಕೆ ಬಂದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya
error: Content is protected !!