ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆಯಲ್ಲಿ ರಾಜ್ಯಶಾಸ್ತ್ರ ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಮಾನವಿಕ ಅಧ್ಯಯನ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಯಿತು.

ಸಮ್ಮೇಳನವನ್ನು ಅಲಯನ್ಸ್ ಯೂನಿವರ್ಸಿಟಿ, ಬೆಂಗಳೂರು- ಕಾನೂನು ವಿದ್ಯಾಲಯದ ನಿರ್ದೇಶಕರಾದ ಡಾ. ದೇವಯ್ಯ ಎನ್.ಜಿ ರವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಡಿಜಿಟಲ್ ಯುಗದಲ್ಲಿ ಸ್ಥಿರ ಪರಿಸರವನ್ನು ಕಾಯ್ದುಕೊಳ್ಳುವ ಅಗತ್ಯತೆಯನ್ನು ವಿವರಿಸಿದರು. ಫ್ರಾನ್ಸ್ನ ಜೀನ್ ಮೌಲಿನ್ ವಿಶ್ವವಿದ್ಯಾಲಯದ ಡಾ. ಜುಲಿಯನ್ ಪ್ಯಾರೆಟ್ ರವರು ಸಮ್ಮೇಳನದ ದಿಕ್ಕೂಚಿ ಭಾಷಣ ಮಾಡಿದರು. ಶಿಕ್ಷಣ, ಕೈಗಾರಿಕೆ ಮತ್ತು ಕೃತಕ ಬುದ್ಧಿಮತ್ತೆಯ ಪ್ರಸ್ತುತತೆಯ ಕುರಿತು ಮಾತನಾಡಿದರು. ವಿಯೆಟ್ನಾಮ್ನ ಹೋ-ಚಿ-ಮಿನ್ ಸಿಟಿ ವಿಶ್ವವಿದ್ಯಾನಿಲಯದ ಡಾ.ನ್ಯುಯನ್ ಫಾನ್ ಫುವಾಂಗ್ ಟಾನ್ ರವರು ಆನ್ಲೈನ್ ಮೂಲಕ ಮುಖ್ಯ ಭಾಷಣ ಮಾಡಿದರು.
ಎಕ್ಸೆಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸುಮಂತ್ ಕುಮಾರ್ ಜೈನ್ ಬಿ., ಸಮ್ಮೇಳನದಲ್ಲಿ ಭಾಗವಹಿಸಿ ಶುಭಾಶಯಗಳನ್ನು ಕೋರಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಾಧವರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಮ್ಮೇಳನದ ಮುಖ್ಯಸ್ಥ ಡಾ. ಕೀರ್ತಿರಾಜ್ ರವರು ಅಧಿವೇಶನದ ಪಕ್ಷಿನೋಟ ನೀಡಿದರು. ಅಧಿವೇಶನದ ಸಂಚಾಲಕರಾದ ಪ್ರೊ.ಪ್ರವೀಣ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಕು.ನಿಶಾ ಮತ್ತು ತಂಡದವರು ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ನವೀನ್ ಡಯಾಸ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶೈಲೇಶ್ ಕುಮಾರ್ ಡಿ. ಎಚ್. ಧನ್ಯವಾದವಿತ್ತರು. IQAC ಸಂಚಾಲಕರಾದ ಡಾ.ಅವಿತ ಮರಿಯಾ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.











