ತೋಟತ್ತಾಡಿ: ತೆಂಗಿನ ಕಾಯಿ ತೆಗೆಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನ.20ರಂದು ನಡೆದಿದೆ.
ತೋಟತ್ತಾಡಿ ಗ್ರಾಮದ ಕಜೆ ನಿವಾಸಿ ನಾಗೇಶ್ (47 ವರ್ಷ) ಮೃತ ವ್ಯಕ್ತಿ . ನ.20ರಂದು ತೆಂಗಿನ ಕಾಯಿ ತೆಗೆಯಲು ಮರ ಹತ್ತಿದ್ದ ನಾಗೇಶ್ ರವರು ಆಯತಪ್ಪಿ ಕೆಳಗೆ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತರು ತಾಯಿ ಕಲ್ಯಾಣಿ, ಪತ್ನಿ ಜಯಶ್ರೀ , ಪುತ್ರಿ ಮೋಕ್ಷ , ಪುತ್ರ ವಾರ್ಷಿತ್ ರನ್ನು ಅಗಲಿದ್ದಾರೆ.











