ಬೆಳ್ತಂಗಡಿ: ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಸುಲ್ಕೇರಿ ಶ್ರೀರಾಮ ಶಾಲೆ, ಯಲ್ಲಿ ನಡೆದಿದ್ದು, ಕುಂಭಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಎಂಟನೇ ತರಗತಿಯ ಕು. ಪ್ರಿಯಾ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಎಂಟನೇ ತರಗತಿಯ ಕು. ಚಿನ್ಮಯಿ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಚರ್ಚಾ ಸ್ಪರ್ಧೆ ಯಲ್ಲಿ ತೃತೀಯ ಸ್ಥಾನ , ಜಾನಪದ ನೃತ್ಯ ಕು ಪ್ರಾಪ್ತಿ 8ನೇ ತರಗತಿ , ಕು. ಅನನ್ಯ ಎಂಟನೇ ತರಗತಿ, ಕುಮಾರಿ ಸಾನ್ವಿ 8ನೇ ತರಗತಿ , ಕುಮಾರಿ ದೃಶ್ಯ 8ನೇ ತರಗತಿ, ಕುಮಾರಿ ಸಾನ್ವಿ 9ನೇ ತರಗತಿ, ಕುಮಾರಿ ರಕ್ಷಾ 9ನೇ ತರಗತಿ ಇವರು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಶಾಲಾ ಸಂಸ್ಥಾಪಕ ಗಿರೀಶ್ ಕೆ ಹೆ ಚ್ ಹಾಗೂ ಸಂಚಾಲಕ ಅಶ್ವಿತ್ ಕುಲಾಲ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಶಾಂತಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಸುಚಿತ್ರ ಮತ್ತು ಕುಮಾರಿ ಅನುಷಾ ಇವರು ವಿದ್ಯಾರ್ಥಿಗಳಿಗೆ ಸಹಕರಿಸಿರುತ್ತಾರೆ.











