ಅಳದಂಗಡಿ:ಅತ್ಯಂತ ಕಾರಣೀಕ ಕ್ಷೇತ್ರ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರು ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಆಡಳಿತದಾರರಾದ ಶಿವಪ್ರಸಾದ್ ಅಜಿಲರು ರಾಜ್ಯಧ್ಯಕ್ಷರನ್ನು ಶಾಲು ಹಾಕಿ ಗೌರವಿಸಿದರು.
ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕರುಗಳಾದ ಹರೀಶ್ ಪೂಂಜ, ಅರವಿಂದ್ ಸರ್ಜಿ ಜೊತೆಗಿದ್ದರು. ಬಿಜೆಪಿ ಪ್ರಮುಖರಾದ ಸದಾನಂದ ಪೂಜಾರಿ ಉಂಗಿಲಬೈಲು, ಶಶಿರಾಜ್ ಶೆಟ್ಟಿ ಜಿ.ಕೆರೆ, ಸುಪ್ರಿತ್ ಜೈನ್, ರವಿ ಪೂಜಾರಿ, ಓಂಕಾರ್ ಜೈನ್, ಕಮಲೇಶ್, ಹರೀಶ್ ಆಚಾರ್ಯ, ಪುನಿತ್ ಪಿಲ್ಯ,ಚಂದ್ರರಾಜ್ ಮೇಲಂತಬೆಟ್ಟು, ಉಮೇಶ್ ಕುಲಾಲ್, ಪ್ರಭಾಕರ ಪೂಜಾರಿ ಕೊಡಂಗೆ ಹಾಗೂ ಇತರರು ಉಪಸ್ಥಿತರಿದ್ದರು.











